Friday, June 11, 2010
champion of downtrodden Nalvadi Krishnaraja wodeyar: 50 Reservation for BC
champion of downtrodden Nalvadi Krishnaraja wodeyar: 50% Reservation for BC, Mysore state
ಶೋಷಿತರ ಧ್ವನಿ ಪ್ರೊ.ಬಿ. ಕೃಷ್ಣಪ್ಪ (ಭಾಗ-1) Prof.B.Krishnappa
ಶೋಷಿತರ ಧ್ವನಿ ಪ್ರೊ.ಬಿ. ಕೃಷ್ಣಪ್ಪ (ಭಾಗ-1) Prof.B.Krishnappa
Dalita Sangharsha Samiti DSS
source VARTHABHARATHI daliy
ಶೋಷಿತರ ಧ್ವನಿ ಪ್ರೊ.ಬಿ. ಕೃಷ್ಣಪ್ಪ (ಭಾಗ-1)
ಬುಧವಾರ - ಜೂನ್ -09-2010 ಪ್ರಾಚೀನ ಕಾಲಘಟ್ಟದ ನಂತರದ ಹಂತಗಳ ಭಾರತೀಯ ಇತಿಹಾಸದಲ್ಲಿ ಮನುಷ್ಯನನ್ನು ಮತ್ತೊಬ್ಬ ಮನುಷ್ಯ ಗುಲಾಮನನ್ನಾಗಿ ಕಾಣು ತ್ತಿದ್ದ; ಹಂದಿ ನಾಯಿಗಳಿಗಿಂತಲೂ ಕೀಳಾಗಿ ಕಂಡು ತುಳಿಯುವ ಶಕ್ತಿಗಳ ಸಾಮಾಜಿಕ ವ್ಯವಸ್ಥೆ ರೂಪುಗೊಂಡಿತು. ಇಂತಹ ಕ್ರೂರ ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೊಳಪಟ್ಟ ವರಿಗೆ ಪ್ರಜ್ಞೆ ಹುಟ್ಟಿಸಿ, ಸ್ವಾಭಿಮಾನ, ಆತ್ಮಗೌರವ ತುಂಬಿಸಿ ತುಳಿಯುವ ಸಮಾಜದ ವಿರುದ್ಧ ಸಂಘರ್ಷಕ್ಕೆ ಅವರನ್ನು ಸಿದ್ಧಗೊಳಿಸಬೇಕು.ಶೋಷಿತರ ಹಕ್ಕುಗಳಿ ಗಾಗಿ, ಸಿಡಿ ದೇಳುವ ಹಾಗೆ ಅವರನ್ನು ಪ್ರತಿಭಟನೆ ಮಾಡುವ ಹಾಗೆ ಮಾಡಬೇಕೆಂದು ಭಾವಿ ಸಿದ ಮಾನವೀಯ ಚಿಂತಕ ಪ್ರೊ. ಬಿ. ಕೃಷ್ಣಪ್ಪ.
ಚಿತ್ರದುರ್ಗ ಜಿಲ್ಲೆಯ ಹರಿಹರದ ಬಸಪ್ಪ ಮತ್ತು ಚೌಡಮ್ಮನವರ ಹಿರಿಯ ಮಗನಾಗಿ ಪ್ರೊ.ಬಿ. ಕೃಷ್ಣಪ್ಪನವರು 1938, ಜೂನ್ 9 ರಂದು ಜನಿಸಿದರು.
ಕೃಷಿ ಕೂಲಿ ಮಾಡಿಕೊಂಡು ಕಡು ಬಡತನದ ಜೀವನವನ್ನು ಸಾಗಿಸುತ್ತಿ ದ್ದರು. ಹಸಿವು ಮತ್ತು ಬಡತನದ ಕಾರಣ ದಿಂದ ಹೊಟೇಲ್ ಒಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿದು, ಶ್ರೀಮಂತರ ದಬ್ಬಾಳಿಕೆ ಮತ್ತು ಗುಲಾಮಗಿರಿಯ ನೋವನ್ನು ಅನುಭವಿಸಿದರು.
ನಡುವೆ ಬಿಟ್ಟಿರುವ ವಿದ್ಯಾಭ್ಯಾಸವನ್ನು ಮತ್ತೆ ಮುಂದು ವರಿಸಿ ಚಿತ್ರದುರ್ಗದಲ್ಲಿ ಬಿ.ಎ.ಪದವಿ, ಮೈಸೂರಲ್ಲಿ ಎಂ.ಎ. ಪದವಿ ಪಡೆದರು. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸರ್.ಎಂ.ವಿ. ಕಾಲೇಜಿನಲ್ಲಿ 1967ರಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದರು. ಬಳಿಕ ಅಲ್ಲಿಯೇ ಪ್ರೊಫೆಸರ್ ಮತ್ತು ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿದರು. ಶಿವಮೊಗ್ಗ ಜಿಲ್ಲೆಯ ಕಾಗೋಡು ಗ್ರಾಮದಲ್ಲಿ ಶಾಂತವೇರಿ ಗೋಪಾಲ ಗೌಡರ ನಾಯಕತ್ವದಲ್ಲಿ ‘‘ಉಳುವವನೆ ಭೂಮಿಗೆ ಒಡೆಯ’’ ಚಳವಳಿ ಮತ್ತು ಜಾತಿವಿನಾಶ ಚಳವಳಿ ಆರಂಭ ವಾಗಿದ್ದು, ಆ ಚಳುವಳಿಯಿಂದ ಪ್ರೊ.ಬಿ. ಕೃಷ್ಣಪ್ಪ ಪ್ರಭಾವಿತರಾದರು.
ಬುದ್ಧ, ಅಂಬೇ ಡ್ಕರ್, ಲೋಹಿಯಾ, ಮಾರ್ಕ್ಸ್ ಮತ್ತು ಪೆರಿಯಾರ್ ಮೊದಲಾದ ಈ ಮಹಾನ್ ವ್ಯಕ್ತಿಗಳ ಬಗ್ಗೆ ಅವರು ಅಧ್ಯಯನ ಮಾಡಿದರು. ಆದರೆ ಅವರು ಹೆಚ್ಚು ಪ್ರಭಾವಿತರಾದದ್ದು ಅಂಬೇಡ್ಕರ್ ವಿಚಾರಗಳಿಂದ. 1970ರ ದಶಕದಲ್ಲಿ ಡಾ. ಲೋಹಿಯಾರ ಸೋಷಿಯಲಿಸ್ಟ್ ಪಾರ್ಟಿ ಮತ್ತು ಆ ಪಕ್ಷದ ‘ಸಮಾಜವಾದಿ ಯುವಜನ ಸಭಾ’ ಸಂಘಟನೆಯಲ್ಲಿ ರಾಜ್ಯ ಮುಖಂಡರಾಗಿ ದುಡಿದರು.
ಆದರೆ ಸಮಾಜವಾದಿ ಚಳವಳಿಯಲ್ಲಿ ಮೇಲು ಜಾತಿಯವರೇ ನಾಯಕರಾಗಿದ್ದು, ಕೆಳಜಾತಿಗಳ ಮೇಲೆ ನಡೆಯುವ ದೌರ್ಜನ್ಯ ಮತ್ತು ಶೋಷ ಣೆಗಳನ್ನು ಖಂಡಿಸುವ ಕಾರ್ಯಕ್ರಮಗಳು ಮತ್ತು ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತರ ಸಮಸ್ಯೆಗಳ ಕುರಿತು ಹೋರಾಟ ಗಳು ಇರಲಿಲ್ಲವಾದ್ದರಿಂದ ಸಮಾಜವಾದಿ ಚಳವಳಿಯ ಸಂಘಟನೆಯನ್ನು ತೊರೆದರು. ಅಂಬೇಡ್ಕರ್ವಾದದ ನೆಲೆಗಟ್ಟಿನಲ್ಲಿ 1974-75 ರಲ್ಲಿ ಜಾತಿರಹಿತ, ವರ್ಗರಹಿತ, ಲಿಂಗಭೇದ ರಹಿತ ಸಮಾಜ ರಚನೆಯ ಉದ್ದೇಶ ಹೊಂದಿದ ಸಂಘಟನೆಯನ್ನು ತಮ್ಮ ಒಡನಾಡಿ ಗಳೊಂದಿಗೆ ಸೇರಿ ಅಸ್ತಿತ್ವಕ್ಕೆ ತಂದರು.
ಮೊದಲ ಬಾರಿಗೆ ಆರಂಭಿಸಿದ ಕರ್ನಾಟಕ ದಲಿತ ಲೇಖಕರ ಮತ್ತು ಕಲಾವಿದರ ಸಂಘಟನೆ (ದಲೇಕಸಂ;)ಯ ಶೀರ್ಷಿಕೆಯನ್ನು ನಂತರದಲ್ಲಿ ಬದಲಾಯಿಸಿ ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ (ದಸಂಸ;) ಎಂದು ಶೀರ್ಷಿಕೆಯಾಗಿ ರಾಜಕೀಯ ರಹಿತವಾದ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಎಂಬುದಾಗಿ ಆರಂಭ ವಾಯಿತು. ಮುಖ್ಯವಾಗಿ ‘ಅಸ್ಪಶ್ಯ ವರ್ಗಗಳು’ ಮತ್ತು ಸಹ ಶೋಷಿತ ಬಡವರೆಲ್ಲರೂ ‘ದಲಿತ’ ರೆಂದು ವಿಶಾಲ ಅರ್ಥ ಹೊಂದಿತು. ಈ ಹಿನ್ನೆಲೆ ಯಿಂದ ಶೋಷಿತರ ವಿಮೋಚನೆಯ ಆಂದೋ ಲನವು ಶೋಷಿತರಾದ ‘ಅಸ್ಪಶ’ ವರ್ಗಗಳ ನೇತೃತ್ವದಲ್ಲಿ ನಡೆಯಬೇಕೆಂದು ಸೂಚಿಸಿದರು.
ರಾಜ್ಯಾದ್ಯಂತ ದಲಿತರ ಮೇಲೆ ನಡೆಯುತ್ತಿದ್ದ ಕೊಲೆ, ಸುಲಿಗೆ, ಹಲ್ಲೆ, ಅತ್ಯಾಚಾರಗಳ ವಿರುದ್ಧ ಅಸಂಖ್ಯಾತ ಪ್ರತಿಭಟನಾ ಚಳವಳಿಗಳ ನೇತೃತ್ವವನ್ನು ಅವರು ವಹಿಸಿದರು. ಸರಕಾರಿ ಭೂಮಿ ಆಕ್ರಮಣ, ಭೂ ಹೀನರಿಗೆ ಭೂ ಮಂಜೂರಾತಿ ಮುಂತಾದ ಹೋರಾಟಗಳು ನಡೆದವು.
ಹಿಂದುಳಿದ ವರ್ಗದ ‘ಶೇಷಗಿರಿ ಯಪ್ಪನ ಕಗ್ಗೊಲೆ’ ಮತ್ತು ಆತನ ಮಗಳು ಅನುಸೂಯ’ರ ಮೇಲೆ ಜರಗಿದ ಅತ್ಯಾಚಾರ ಖಂಡಿಸಿ ಕೋಲಾರದಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ, ಪರಿಶಿಷ್ಟರ ಆಸ್ತಿ ಪರಭಾರೆ ನಿಷೇಧ ಕಾಯ್ದೆ (), ‘ಚಂದ್ರಗುತ್ತಿ ಬೆತ್ತಲೆ ಮೆರವಣಿಗೆ’ ನಿಷೇಧ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ಚೆನ್ನಪ್ಪ ರೆಡ್ಡಿ ಆಯೋಗ ಮತ್ತು ಮಂಡಲ್ ವರದಿ ಆಯೋಗ ಜಾರಿಗೊಳಿಸಲು ಚಳವಳಿ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಮೀಸ ಲಾತಿ ಮತ್ತು ಭಡ್ತಿ ಮೀಸಲಾತಿ ವಂಚನೆ ಪ್ರತಿ ಭಟಿಸಿ ಚಳವಳಿಗಳು ಹೀಗೆ ಅಸಂಖ್ಯಾತ ನಿರಂತರ ಹೋರಾಟಗಳನ್ನು ಜೀವನದುದ್ದಕ್ಕೂ ನಡೆಸಿದರು.
ವ್ಯವಸ್ಥೆಯ ಆಮೂಲಾಗ್ರ ಬದಲಾ ವಣೆಗಾಗಿ ಸ್ವತಂತ್ರ ರಾಜಕೀಯ ಅಧಿಕಾರವನ್ನು ಗಳಿಸಬೇಕೆಂದು ಅದಕ್ಕಾಗಿ ಅಂಬೇಡ್ಕರ್ ಸಿದ್ಧಾಂತದ ಆಧಾರ ಹೊಂದಿದ ಹೊಸ ಪಕ್ಷ ವೊಂದರ ಮೂಲಕ ಶೋಷಿತರ ಪರವಾದ ಸರಕಾರವನ್ನು ರಚಿಸುವ ಅಗತ್ಯತೆಯನ್ನು 1980ರಲ್ಲಿ ಪ್ರತಿಪಾದಿಸಿದರು. ಸ್ವತಃ ಹೊಸ ಪಕ್ಷವೊಂದನ್ನು ಹುಟ್ಟು ಹಾಕಲು ಹಲವು ಬಾರಿ ಅವರು ಪ್ರಯತ್ನಿಸಿದರು. ಆದರೆ ಸಮಾನ ಮನ ಸ್ಕರ ಸಹಕಾರವಿಲ್ಲದೆ ಅಸಹಕಾರದಿಂದಾಗಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಅವರ ಪ್ರಯತ್ನ ಸಫಲವಾಗಲಿಲ್ಲ.
ಜಾತಿ ರೋಗದ ಸೋಂಕಿನಿಂದ ಗುಣ ಮುಖರಾಗದೆ ಅದರ ಕಠೋರ ಸ್ವಭಾವಕ್ಕೆ ಹುಟ್ಟಿದ ವಿಭಿನ್ನ ಹೆಸರಿನ ಉಪಜಾತಿಗಳಾಗಿ, ಜನಬಲ, ಧನಬಲ, ಬುದ್ಧಿಬಲ ಹೀಗೆ ಮೂರು ಬಲಗಳಿಲ್ಲದೆ, ತಮ್ಮಿಳಗೆ ಒಗ್ಗಟ್ಟು ಇಲ್ಲದೆ ಊರು ಕೇರಿಗಳಲ್ಲಿ ಚೆಲ್ಲಿ ಹೋಗಿ ಅಸಂಘಟಿತರಾದ ದಲಿತರನ್ನು ಒಟ್ಟುಗೂಡಿಸಿ ಅವರಿಗೆ ಸಂಘಟನೆಯ ಅರಿವು ಮೂಡಿಸಿ ಕರ್ನಾಟಕದ ಲಕ್ಷಾಂತರ ಶೋಷಿತರಿಗೆ ಧ್ವನಿಯಾದ ವರು ಪ್ರೊ.ಬಿ. ಕೃಷ್ಣಪ್ಪರು. ಶೋಷಕರ ಮುಂದೆ ನಿಂತು ಮಾತನಾಡಲು ಬಾಯಿ ಇಲ್ಲದವರಿಗೆ ಬಾಯಿಯಾದರು. ದೌರ್ಜನ್ಯಗಳಿಂದ ಹೆದರಿ ನರಳು ತ್ತಿದ್ದ ಕಂಠಗಳಿಗೆ ಗಟ್ಟಿ ಧ್ವನಿಯಿಂದ ಮಾತ ನಾಡುವಂತೆ ಧೈರ್ಯವನ್ನೂ, ಸ್ವಾಭಿ ಮಾನವನ್ನು ತುಂಬಿದವರು.
ಕರ್ನಾಟಕ ದಲಿತ ಚಳವಳಿಯಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರು ಪ್ರೊ.ಬಿ.ಕೆ.ಯವರೆಂದೇ ಪರಿಚಿತರು. ಕಾರ್ಯಕರ್ತರೊಂದಿಗೆ ಬೆರೆತಾಗ, ತಾನೊಬ್ಬ ಪ್ರೊಫೆಸರ್ ಎಂಬ ಅಂತಸ್ತ (ಜಿಜ್ಞಜಿಠಿ )ನ್ನು ಎಂದೂ ತೋರ್ಪ ಡಿಸದ ಸರಳ ಸ್ವಭಾವದ ಆತ್ಮೀಯ ಹಿರಿಯರಾಗಿದ್ದರು. ಸಮಯ ಪ್ರಜ್ಞೆ ಯಿಲ್ಲದೆ ವರ್ತಿಸುವವರ ಮೇಲೆ ತುಸು ರೇಗುತ್ತಿದ್ದರೂ, ತಮ್ಮ ಪಾಲಿಗೆ ಅದೊಂದು ನೈತಿಕತೆಯ ಪಾಠವೆಂದೇ ಕಾರ್ಯ ಕರ್ತರು ತಿಳಿದಿದ್ದರು. ಕರ್ನಾಟಕ ದ.ಸಂ.ಸ. ಅದರ ಚಟುವಟಿಕೆಯ ಕುರಿತು ಮಾಧ್ಯಮದ ಮೂಲಕ ಪ್ರಚಾರ ಗೊಳ್ಳದೆ, ತನ್ನದೇ ಆದ ಶೈಲಿಯಿಂದ ಜನರ ಬಾಯಿದೆರೆ ಮೂಲಕ ಪ್ರಚಾರವಾಗುವ ಕಾಲವಾಗಿತ್ತು.
ಪ್ರೊ.ಬಿ.ಕೆ.ಯವರ ನಾಯಕತ್ವವು ದಲಿತ ಚಳವಳಿಗೆ ಸೈದ್ಧಾಂತಿಕವಾದ ಜೀವಾಳ ವಾಗಿತ್ತು. ಜರಗುವ ಯಾವುದೇ ದಲಿತ ಚಳವಳಿಯಲ್ಲಿ ಬಿ.ಕೆ. ಭಾಗವಹಿಸುತ್ತಾ ರೆಂದರೆ ದಲಿತರ ಅಂತಃಕರಣದಲ್ಲಿ ಮೂಡಿ ಬರುತ್ತಿತ್ತು ಮಹದ್ದಾನಂದ. ಅವರು ಮಂಡಿಸುತ್ತಿದ್ದ ಅವರ ದೀರ್ಘ ವಾದ ಮಾತನ್ನು ಉದಾಸೀನವಿಲ್ಲದೆ ನಿಶ್ಶಬ್ದದಿಂದ ದಲಿತರು ಆಲಿಸುತ್ತಿದ್ದರು. ಬಿ.ಕೆ. ಮಾತಿಗೆ ಅಷ್ಟು ಆಕರ್ಷಣೆಯಿತ್ತು ಮತ್ತು ಅವರ ಮಾತುಗಳು ದಲಿತರು ಅನುಭವಿಸುತ್ತಿದ್ದ ನೋವು ನಲಿವುಗಳಿಗೆ ಹತ್ತಿರ ವಿತ್ತು. ಅವರು ರಚಿಸಿರುವ ಸಾಹಿತ್ಯಗಳು ತೀರಾ ಕಡಿಮೆ.
ಬಹುತೇಕ ವಿಚಾರಗಳನ್ನು ಸಭೆ, ಸಮಾ ರಂಭ ಮತ್ತು ಶಿಬಿರಗಳಲ್ಲಿ ವೌಖಿಕವಾಗಿ ಪ್ರಚಾರ ಪಡಿಸುತ್ತ ಬಂದವರು. ಹಲವಾರು ವಿಷಯಗಳ ಮೇಲೆ ನಾವು ಮಾತನಾಡಿದ ಮಾತುಗಳನ್ನು ಸಂಗ್ರಹಿಸಿ ಅಚ್ಚು ಹಾಕುತ್ತಿದ್ದರೆ ಅನೇಕ ಸಂಪುಟಗಳನ್ನು ಹೊರತರಬಹುದಿ ತ್ತೆಂದು ಸ್ವತಃ ಬಿ.ಕೆ.ಯವರೆ ನುಡಿಯುತ್ತಿದ್ದರು. ರಾಜ್ಯದ ಮೂಲೆ ಮೂಲೆಗಳ ದಲಿತ ಕಾಲನಿ ಗಳಲ್ಲಿ ಸಮಿತಿಯ ಹಾಡುಗಳು ಪ್ರತಿದಿನ ಮೊಳಗುತ್ತಿತ್ತು.
ಸಂಘಟನೆಗೆ ಬಹುದೊಡ್ಡ ಮಾಧ್ಯಮವೆಂದರೆ ‘ದಲಿತ ಕಲಾ ಮಂಡಳಿ’ ತನ್ನ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನಸಂಘ ಟಿಸುವುದು ಈ ಮಾಧ್ಯಮದ ಕೆಲಸ. ಒಂದು ಅಂಗಕ್ಕೆ ನೋವಾದರೆ ಮತ್ತೊಂದು ಅಂಗಕ್ಕೂ ನೋವಾಗುತ್ತದೆಂಬ ಒಗ್ಗಟ್ಟಿನ ಬಾಂಧವ್ಯದ ಸರಪಣಿಯಂತೆ ಒಂದು ಹಳ್ಳಿಯಲ್ಲಿ ನಡೆದ ಒಂದು ಘಟನೆಗೆ ಸಮಗ್ರವಾಗಿ ದಲಿತರು ಸ್ಪಂದಿಸಿ ಪ್ರತಿಭಟಿಸುತ್ತಿದ್ದರು. ಸೀಟಿ (ಸಿಳ್ಳು;) ಹಾಕಿ ಸೂಚನೆ ಕೊಡುವಂತೆ ಸಮಿತಿಯು ಒಂದು ಕರೆ ನೀಡಿದರೆ ಸಾಕು, ಜೇನು ನೊಣದಂತೆ ಜನ ಒಗ್ಗಟ್ಟಾಗುತ್ತಿದ್ದರು.
-ಕೆ. ಪಿ. ಅಮೀನ್
cntnd...........
Monday, June 7, 2010
Tuesday, June 1, 2010
ಗೋ ಹತ್ಯೆ ಬಗ್ಗೆ ಸಾವರ್ಕರ್ ಉವಾಚ
Courtesy: VarthaBarathi ಮಂಗಳವಾರ - ಮಾರ್ಚ್ -30-2010
ಪಶುವನ್ನು ದೇವರೆಂದು ಹೇಳಿದರೂ ದೇವರನ್ನೇ ಪಶುಗಿಂತಲೂ ಹೀನವಾಗಿ ಕಾಣಲಾಗಿದೆ. ಹಸುವಿನ ಶರೀರದಲ್ಲಿ 33 ಕೋಟಿ ದೇವತೆ ಗಳಿದ್ದಾರೆಂದು ಬಣ್ಣಿಸಿ, ಅದರ ಗಂಜಲ, ಸಗಣಿ ವಿಸರ್ಜನೆ ಯಾಗುವ ಸ್ಥಳಗಳಲ್ಲಿಯೂ ದೇವರನ್ನು ಸ್ಥಾಪಿಸಲಾಗಿದೆ! ಕಟುಕನು ದನವನ್ನು ಒಂದೇ ಹೊಡೆತಕ್ಕೆ ಕೊಲ್ಲುವಾಗ ಆ ದೇವತೆಗಳಲ್ಲಿ ಒಬ್ಬನಾದರೂ ಕಟುಕನನ್ನು ಏಕೆ ತಡೆಯುವುದಿಲ್ಲ? ಆ ದೇವರೂ ಭಕ್ತರಂತೆ ಹೇಡಿಯೇ? ಕಟುಕನೇ 33 ಕೋಟಿ ದೇವತೆಗಳಿಗಿಂತ ಪರಾಕ್ರಮಿಯೆ?
ಕರ್ನಾಟಕ ಸರಕಾರವು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಕುರಿತ ಮಸೂದೆಯನ್ನು ಮಂಡಿಸಿ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂದಕ್ಕೆ ಪಡೆದು ಮತ್ತೆ ಮಂಡಿಸಿದೆ. ಮತಧರ್ಮನಿರಪೇಕ್ಷ ಸಂವಿಧಾನವನ್ನು ಒಪ್ಪಿರುವ ನಾವು ಗೋಹತ್ಯೆಯಂಥ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯವನ್ನು ವೈಚಾರಿಕ ನಿಕಷಕ್ಕೆ ಒಡ್ಡಬೇಕು. ಈ ನಿಟ್ಟಿನಲ್ಲಿ ಹಿಂದೂರಾಷ್ಟ್ರ ಪ್ರತಿಪಾದಕರಾಗಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಗೋವಿನ ಕುರಿತ ವಿಚಾರಗಳು ಗಮನಾರ್ಹ (‘ಆಕಳು ಒಂದು ಉಪಯುಕ್ತ ಪ್ರಾಣಿ, ಮಾತೆಯಲ್ಲ, ದೇವತೆಯಂತೂ ಅಲ್ಲವೇ ಅಲ್ಲ’- ಮಹಾರಾಷ್ಟ್ರ ಶಾರದಾ, ಎಪ್ರಿಲ್ 1935)
‘‘ಹಸು, ಎತ್ತುಗಳನ್ನು ಪೂಜಿಸುವುದು ಹಿಂದೂ ಧರ್ಮಕ್ಕೆ ವಿಶಿಷ್ಟವಾದ ಸಂಗತಿ ಯಲ್ಲ. ಪ್ರಪಂಚದ ವಿವಿಧ ಕಡೆ ಜೀವಸಷ್ಟಿಗೆ ಕಾರಣವಾದ ಪುರುಷ ಮತ್ತು ಸ್ತ್ರೀ ಅವಯವಗಳ ಪ್ರತೀಕಗಳಾಗಿ ವಷಭ ಮತ್ತು ಗೋವಿನ ಪೂಜೆ ನಡೆಯುತ್ತಿತ್ತು.’’‘‘ನಾನು ಕಂಡ ಹಲವು ಪ್ರಾಮಾಣಿಕ, ಶ್ರೇಷ್ಠ, ಸಭ್ಯ ಗೋಭಕ್ತರು ಗೋಮಾತೆಯ ಗಂಜಲ ಮತ್ತು ಸಗಣಿಗಳಿಗೆ ಬ್ರಹ್ಮವಾದದ ಆಧಾರ ನೀಡಿ ಪಂಚಗವ್ಯ ಸೇವಿಸುತ್ತಾರೆ. ಗಂಜಲವನ್ನು ದೇವಾಲಯದಲ್ಲಿ ಸಿಂಪಡಿಸುತ್ತಾರೆ. ಆದರೆ ಅವರಿಗಿಂತಲೂ ಪ್ರಜ್ಞಾವಂತರಾದ ಡಾ ಅಂಬೇಡ್ಕರ್ರಂಥ ಶುದ್ಧ ಮತ್ತು ಪೂರ್ವಾಸ್ಪಶರ ಕೈಯಿಂದ ನಿರ್ಮಲ ಗಂಗೋದಕ ಕುಡಿಯುವುದಿಲ್ಲ! ಅದು ಮೈಗೆ ಸಿಂಪಡಿಸಿದರೂ ಮೈಲಿಗೆಯಾಯಿತೆಂದು ಸ್ನಾನ ಮಾಡುತ್ತಾರೆ.’’
‘‘ಹಸು ದೇವತೆ ಎಂದೂ ಹಾಗೆಯೇ ವರಾಹಾವತಾರಿಯಾದ ದೇವರು ಹಂದಿ ಎಂದು ಪುರಾಣ ಹೇಳುತ್ತದೆ. ಹೀಗಿರುವಾಗ ಗೋರಕ್ಷಣೆಯೇ ಏಕೆ ಬೇಕು? ಹಂದಿ ರಕ್ಷಣೆ ಸಂಘವನ್ನು ಸ್ಥಾಪಿಸಿ ಹಂದಿಪೂಜೆಯನ್ನೇಕೆ ಬಳಕೆಗೆ ತರಬಾರದು? ಮನುಷ್ಯನು ಎಲ್ಲ ರೀತಿಯಿಂದ ತನಗಿಂತ ಹೀನಗುಣವಿರುವ ಪಶುವನ್ನು ದೇವರೆಂದು ಒಪ್ಪುವುದರಿಂದ ಮನುಷ್ಯನನ್ನೇ ಪಶುವಿಗಿಂತಲೂ ಕೀಳೆಂದು ಒಪ್ಪಿ ಮಾನವೀಯತೆಯನ್ನು ಗೌಣಗೊಳಿಸಿದಂತಾಗುತ್ತದೆ.’’
‘‘ಮನುಷ್ಯ ಎಲ್ಲ ದಷ್ಟಿಯಿಂದ ತನಗಿಂತಲೂ ಸರ್ವಶ್ರೇಷ್ಠವಾದ ಪ್ರತೀಕವನ್ನು ಮಾತ್ರ ದೇವರೆಂದು ಸ್ವೀಕರಿಸಬೇಕು. ಕತ್ತೆ ಬೇಕಾದರೆ ಗೋವನ್ನು ತನಗಿಂತ ಶ್ರೇಷ್ಠ ಎಂದು ಸ್ವೀಕರಿಸಲಿ. ಆದರೆ ಮನುಷ್ಯ ಹಾಗೆ ಮಾಡುವುದು ಮೂರ್ಖತನ.’’‘‘ಇಂದಿನ ಪರಿಸ್ಥಿತಿಯಲ್ಲಿ ಅರ್ವಾಚೀನ ಮತ್ತು ಪ್ರಯೋಗಸಿದ್ಧ ವಿಜ್ಞಾನವೇ ನಮ್ಮ ರಾಷ್ಟ್ರದ ವೇದವಾಗಬೇಕು.
ಈ ಪ್ರವತ್ತಿಗೆ ಗೋಪೂಜೆ ಹೊಂದಿಕೆಯಾಗದಿದ್ದರೆ ಅದನ್ನು ಬಿಡಬೇಕು. ಇಂಥ ಮೂರ್ಖತನಕ್ಕೆ ಧರ್ಮ ಎಂದು ಪುರಾಣಗಳು ಹೇಳಿರುವುದಕ್ಕೆ ತಲೆದೂಗಿದರೆ ರಾಷ್ಟ್ರದ ಸರ್ವನಾಶ ಖಂಡಿತ. ಗೋಪೂಜೆಯಿಂದ ಆಗುವ ಲಾಭಕ್ಕಿಂತ ಹಾನಿ ಅತ್ಯಂತ ಘಾತುಕ. ಒಂದು ವೇಳೆ ಗೋಹತ್ಯೆ ನಡೆದರೂ ಅಡ್ಡಿಯಿಲ್ಲ. ರಾಷ್ಟ್ರದ ಬುದ್ಧಿಹತ್ಯೆ ಮಾತ್ರ ಆಗಬಾರದು.
ಹಸು ಮತ್ತು ಎತ್ತು ನಮ್ಮ ಕಷಿಪ್ರಧಾನ ರಾಷ್ಟ್ರಕ್ಕೆ ಉಪಯುಕ್ತ ಪ್ರಾಣಿಗಳು ಎಂದು ಆ ಪ್ರಾಣಿಗಳನ್ನು ಎಷ್ಟು ಬೇಕೊ ಅಷ್ಟು ಬಳಸಿದರೆ ಸಾಕು. ಅದರ ಬದಲು ಅದು ದೇವತೆ, ಪುರಾಣದಲ್ಲಿ ಅದನ್ನು ಪೂಜಿಸುವುದನ್ನು ಧರ್ಮ ಎಂದು ಹೇಳಿದೆ ಎಂದು ಬೊಗಳೆ ಬಿಟ್ಟರೆ ರಾಷ್ಟ್ರಕ್ಕೆ ನೂರುಪಟ್ಟು ಹಾನಿಯಾಗುತ್ತದೆ. ಅಲ್ಪ ಲಾಭಕ್ಕಾಗಿ ಹೆಚ್ಚಿನದನ್ನು ಕಳೆದುಕೊಳ್ಳುತ್ತೇವೆ.’’
‘‘ಪಶುವನ್ನು ದೇವರೆಂದು ಹೇಳಿದರೂ ದೇವರನ್ನೇ ಪಶುಗಿಂತಲೂ ಹೀನವಾಗಿ ಕಾಣಲಾಗಿದೆ. ಹಸುವಿನ ಶರೀರದಲ್ಲಿ 33 ಕೋಟಿ ದೇವತೆಗಳಿದ್ದಾರೆಂದು ಬಣ್ಣಿಸಿ, ಅದರ ಗಂಜಲ, ಸಗಣಿ ವಿಸರ್ಜನೆಯಾಗುವ ಸ್ಥಳಗಳಲ್ಲಿಯೂ ದೇವರನ್ನು ಸ್ಥಾಪಿಸಲಾಗಿದೆ! ಕಟುಕನು ದನವನ್ನು ಒಂದೇ ಹೊಡೆತಕ್ಕೆ ಕೊಲ್ಲುವಾಗ ಆ ದೇವತೆಗಳಲ್ಲಿ ಒಬ್ಬನಾದರೂ ಕಟುಕನನ್ನು ಏಕೆ ತಡೆಯುವುದಿಲ್ಲ? ಆ ದೇವರೂ ಭಕ್ತರಂತೆ ಹೇಡಿಯೇ? ಕಟುಕನೇ 33 ಕೋಟಿ ದೇವತೆಗಳಿಗಿಂತ ಪರಾಕ್ರಮಿಯೆ?’’‘‘ ಹಸು ಮಹಾಮಾತೆಯಾಗಿರುವವನೇ ಹಿಂದೂ ಎನ್ನುವುದು ಹಿಂದುತ್ವಕ್ಕೆ ಮಾಡುವ ಅಪಮಾನ. ಹಸು ಕರುವಿಗೆ ಮಾತ್ರ ತಾಯಿ, ಹಿಂದೂಗಳಿಗಲ್ಲ.
‘ಗೋರಕ್ಷಣೆಯೇ ಧರ್ಮ’, ‘ಸ್ವಧರ್ಮೇ ನಿಧನಂ ಶ್ರೇಯಃ’ ಎಂದಾಗ ವಿವೇಕ, ಬುದ್ಧಿ ಸಂಪೂರ್ಣ ಕುರುಡಾಗಿ ಪ್ರಜ್ಞೆ ತಪ್ಪಿದ ಅನುಭವವಾಗುತ್ತದೆ.’’‘‘ಇಂಥ ಅನಾಗರಿಕ ಮತ್ತು ಮೂರ್ಖ ಸಂಸ್ಕಾರಕ್ಕೆ ತಿಲಾಂಜಲಿ ನೀಡುವುದೇ ನಮ್ಮ ಧರ್ಮ ಮತ್ತು ಸಂಸ್ಕತಿಗೆ ಶೋಭಿಸುವ ಮಾರ್ಗ. ಇಂದಿನ ವೈಜ್ಞಾನಿಕ ಯುಗದಲ್ಲಿ ಗೋರಕ್ಷಣೆಯ ದಷ್ಟಿಯಿಂದ ಹಸುವನ್ನು ದೇವತೆ ಎಂದು ಒಪ್ಪುವುದು ಮೂರ್ಖತನ. ಗೋರಕ್ಷಣೆಗೆ ಧಾರ್ಮಿಕ ಸ್ವರೂಪ ಬಿಟ್ಟು ಆರ್ಥಿಕ, ವೈಜ್ಞಾನಿಕ ಸ್ವರೂಪ ನೀಡುವುದು ಉಚಿತ. ಹಸು ಎತ್ತುಗಳನ್ನು ದೇವರೆಂದು ತೋರಿಸುತ್ತ ತಿರುಗುವ ಗೋಭಕ್ತನನ್ನು ತಡೆದು ಎತ್ತನ್ನು ನೊಗಕ್ಕೆ ಹೂಡಬೇಕು; ಅವನನ್ನು ದೇಶಸೇವೆಗೆ ದುಡಿಸಬೇಕು’’ (ಸಾವರ್ಕರ್: ಒಂದು ಅಭಿನವ ದರ್ಶನ, ಅನುವಾದ: ಚಂದ್ರಕಾಂತ ಪೋಕಳೆ ಬೆಳಗಾವಿ 2009 ಪು.27-37).
ಸಾವರಕರ್, ಗೋರಕ್ಷಣೆಯ ಹುಚ್ಚುತನದಂತೆ ಧಾರ್ಮಿಕ ನಂಬಿಕೆಯ ಗೋಭಕ್ಷಣೆಯ ಕ್ರೌರ್ಯವನ್ನೂ ಖಂಡಿಸಿದ್ದಾರೆ. ಆದುದರಿಂದ ಸರಕಾರ ಗೋರಕ್ಷಣೆಯ ಮಸೂದೆಯನ್ನು ಹಿಂದಕ್ಕೆ ಪಡೆದು ಅದರ ಬಗ್ಗೆ ಮತಧರ್ಮ ನಿರಪೇಕ್ಷ ಪ್ರಜಾಪ್ರಭುತ್ವದ ಗೌರವಕ್ಕೆ ಸಲ್ಲುವಂತೆ ವ್ಯಾಪಕವಾದ ವೈಚಾರಿಕ, ವೈಜ್ಞಾನಿಕ ಸಾರ್ವಜನಿಕ ಚರ್ಚೆ ನಡೆಸುವುದು ಅಗತ್ಯ.
*ಡಾ ಪಂಡಿತಾರಾಧ್ಯ ಕನ್ನಡ ಪ್ರಾಧ್ಯಾಪಕ,ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ ಮೈಸೂರು
ಜಾತಿ ಜನಗಣತಿ: ಬಿಜೆಪಿಗೆ ಪ್ರಾಣ ಸಂಕಟ
eÁw d£ÀUÀtw ©eɦUÉ ¥Áæt ¸ÀAPÀl
Courtesy: VarthaBarathi ಸೋಮವಾರ - ಮೇ -31-2010ಸನತ್ ಕುಮಾರ ಬೆಳಗಲಿ
ಜಾತಿ ಆಧಾರಿತ ಜನಗಣತಿಯ ಪ್ರಸ್ತಾಪ ದೇಶದಲ್ಲಿ ವಿವಾದದ ಅಲೆಯನ್ನೆಬ್ಬಿಸಿದೆ. ಈ ಹಿಂದೆ ಬ್ರಿಟಿಷ್ ಆಡಳಿತವಿದ್ದಾಗ 1901 ಹಾಗೂ 1931ರಲ್ಲಿ ಮಾತ್ರ ಜನಸಂಖ್ಯೆಯ ವಿಂಗಡಣೆಗೆ ಹೊಸತತ್ವವನ್ನು ಅಳವಡಿಸಿ ಜನಗಣತಿ ಮಾಡಲಾಗಿತ್ತು. ಆಗ ಇಂಥ ಜಾತಿ ಆಧಾರಿತ ಜನಗಣತಿಯನ್ನು ಬಲವಾಗಿ ವಿರೋಧಿಸಿದ್ದ ಮೇಲ್ಜಾತಿ ಹಿಂದೂಗಳು ಈಗಲೂ ಅಪಸ್ವರ ತೆಗೆದಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಉಚ್ಚ ಜಾತಿಗಳನ್ನು ಪ್ರತಿನಿಧಿಸು ತ್ತಿರುವ ಆರೆಸ್ಸೆಸ್ ಇಂಥ ಜಾತಿ ಆಧಾರಿತ ಜನಗಣತಿಯನ್ನು ಬಲವಾಗಿ ವಿರೋಧಿಸಿದೆ. ಇದರಿಂದ ದಲಿತರಂತೆ ಹಿಂದುಳಿದವರೂ ಸಿಡಿದೆದ್ದು ನಿಂತುಬಿಟ್ಟಿದ್ದಾರೆ. ತನ್ನ ‘ಹಿಂದೂರಾಷ್ಟ್ರ’ ಅಜೆಂಡಾ ಎಲ್ಲಿ ಎಗರಿ ಬೀಳುತ್ತದೋ ಎಂಬ ಆತಂಕ ಅದಕ್ಕಿದೆ.
ಇಂಥ ಆತಂಕದಿಂದಲೇ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಲು ಸಂಘ ಪರಿವಾರ ಕಮಂಡಲ ಅಸ್ತ್ರವನ್ನು ಪ್ರಯೋಗಿಸಿತ್ತು. ಹಿಂದುಳಿದ ವರ್ಗ ಗಳಿಗೆ ಮೀಸಲಾತಿ ಒದಗಿಸುವ ಈ ಆಯೋಗದ ವರದಿಯ ಜಾರಿ ವಿರುದ್ಧ ರಾಮಜನ್ಮ ಭೂಮಿ ಆಂದೋಲನವನ್ನು ಆರಂಭಿಸಿತು. ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ರಥಯಾತ್ರೆ ನಡೆಸಿದರು. ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶಗಳ ಹಿಂದುಳಿದ ಜನವರ್ಗ ಗಳು ರಥಯಾತ್ರೆಯ ವಂಚನೆಯ ಬಲೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀಳಲಿಲ್ಲ.
ಆದರೆ ದೇಶದ ಇತರ ಭಾಗಗಳಲ್ಲಿ ಹಿಂದುಳಿದ ವರ್ಗಗಳ ಯುವಕರು ಹಿಂದುತ್ವದ ಮತ್ತೇರಿಸಿಕೊಂಡರು.ವರಿಂದ ಆರೆಸ್ಸೆಸ್ ರಾಜಕೀಯ ವೇದಿಕೆಯಾದ ಬಿಜೆಪಿಗೆ ಅನುಕೂಲವಾಯಿತು. ಇತರ ಪಕ್ಷಗಳ ಬೆಂಬಲದಿಂದ ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಸಾಧ್ಯವಾಯಿತು. ಆದರೆ ರಾಮಮಂದಿರ ದಂಥ ಭಾವನಾತ್ಮಕ ಪ್ರಶ್ನೆಗಳ ಮೇಲೆ ಹಿಂದುಳಿದವರನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಆ ವರ್ಗಗಳ ಕೆಲವರಿಗೆ ರಾಜಕೀಯ ಅಧಿಕಾರವನ್ನು ನೀಡಲಾಯಿತು. ಶಿವಮೊಗ್ಗದಲ್ಲಿ ಊದಿನಕಡ್ಡಿ ಮಾರಾಟಗಾರ ರಾಗಿದ್ದ ಈಶ್ವರಪ್ಪರಂಥವರು ನಾಯಕತ್ವಕ್ಕೆ ಬಂದರು.
ದಕ್ಷಿಣ ಕನ್ನಡದಲ್ಲಿ ಮೊಗವೀರ, ಬಿಲ್ಲವ ಮುಂತಾದ ಹಿಂದುಳಿದ ಸಮಾಜದ ತರುಣರು ಹಣೆಗೆ ಕುಂಕುಮ ಬಳಿದು ಕೊಂಡು ಕೇಸು ಹಾಕಿಸಿಕೊಳ್ಳಲು, ಜೈಲು ಸೇರಲು, ಕೋರ್ಟಿಗೆ ಎಡತಾಕಲು ತಯಾರಾದರು.ದರೆ ಶ್ರೇಣಿಕೃತ ಸಮಾಜದಲ್ಲಿ ಶೋಷಣೆಗೊಳಗಾದ ಹಿಂದುಳಿದ ವರ್ಗಗಳಿಗೆ ಇದರಿಂದ ಸಾಮಾಜಿಕ ನ್ಯಾಯ ದೊರೆತಂತಾ ಗಲಿಲ್ಲ. ಈಶ್ವರಪ್ಪರಂಥವರು ಪಡೆದ ಅಧಿಕಾರ ಹಕ್ಕಿನಿಂದ ಬಂದುದಲ್ಲ. ರಾಜಕೀಯ ತಂತ್ರದ ಭಾಗವಾಗಿ ಭಿಕ್ಷೆಯಾಗಿ ಬಂದುದು. ಹಿಂದುತ್ವದ ಜಾತಿ ವ್ಯವಸ್ಥೆಯ ಚೌಕಟ್ಟಿನ ಒಳಗೆಯೇ ಹಿಂದುಳಿದ ವರ್ಗಗಳ ಕೃಪಾಶ್ರಿತರಾಗಿರಬೇಕೆಂಬ ಹುನ್ನಾರ ಇದರಲ್ಲಿದೆ.
ಅಂತಲೇ ಮೀಸಲಾತಿ ಹಾಗೂ ಜನಗಣಿತಿ ಯಂಥ ಪ್ರಶ್ನೆಯಲ್ಲಿ ರಾಜಕೀಯ ಪಕ್ಷವಾಗಿ ಬಿಜೆಪಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದರೆ ಆರೆಸ್ಸೆಸ್ ನೇರವಾಗಿ ವಿರೋಧಿಸುತ್ತದೆ. ಈಶ್ವರಪ್ಪ ‘‘ರಂಗನಾಥ ಮಿಶ್ರಾ ಆಯೋಗದ ಬಗ್ಗೆ ನಿಮ್ಮ ನಿಲುವೇನು?’’ ಎಂದು ಪ್ರತಿಪಕ್ಷ ನಾಯಕರಿಗೆ ಸವಾಲು ಹಾಕುತ್ತಾರೆ. ಆದರೆ ಜಾತಿ ಜನಗಣತಿ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಅವರು ಬಹಿರಂಗಪಡಿಸಬೇಕಾಗಿದೆ. ಇಲ್ಲದಿದ್ದರೆ ಅವರು ‘ಹಿಂದುಳಿದವ’ ಎಂದು ಹೇಳಿಕೊಳ್ಳುತ್ತಿರು ವುದು ಬರೀ ಬೂಟಾಟಿಕೆ ಎನ್ನಬೇಕಾಗುತ್ತದೆ.
ಬಿಜೆಪಿ ತಾನು ಸ್ವತಂತ್ರ ರಾಜಕೀಯ ಪಕ್ಷ. ಯಾರ ನಿಯಂತ್ರಣವೂ ತನ್ನ ಮೇಲಿಲ್ಲ ಎಂದು ಹೇಳುತ್ತಿದೆ. ಆದರೆ ಈ ಪಕ್ಷದ ನೀತಿ ಧೋರಣೆಗಳು ಹಾಗೂ ಸಂಘಟನಾ ವ್ಯವಸ್ಥೆಯ ಮೇಲೆ ಆರೆಸ್ಸೆಸ್ ಬಿಗಿಯಾದ ಹಿಡಿತ ಹೊಂದಿರುವುದು ಗುಟ್ಟಿನ ಸಂಗತಿಯಲ್ಲ. ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ಗಡ್ಕರಿಯನ್ನು ನೇಮಕ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಗಡ್ಕರಿಗೆ ಉಭಯ ಸಂಕಟ ಆರಂಭವಾಗಿದೆ.
ಕಾಂಗ್ರೆಸ್ ಹಾಗೂ ಇತರ ಜಾತ್ಯತೀತ ಪಕ್ಷಗಳಂತೆ ಜಾತಿ ಜನಗಣತಿಯನ್ನು ಬೆಂಬಲಿಸದಿದ್ದರೆ ಬಿಜೆಪಿಯಲ್ಲಿನ ಹಿಂದುಳಿದ ಜನವರ್ಗಗಳ ನಾಯಕರು ಬಂಡೇಳುತ್ತಾರೆ. ಬೆಂಬಲಿಸಿದರೆ ಆರೆಸ್ಸೆಸ್ ಗುರುಗಳು ಕಣ್ಣು ಕೆಂಪಗೆ ಮಾಡುತ್ತಾರೆ. ಹಿಂದುಳಿದ ಸಮುದಾಯದ ನಾಯಕರು ತಿರುಗಿ ಬಿದ್ದರೆ ಹಿಂದುತ್ವದ ಹೆಸರಿನಲ್ಲಿ ಕಟ್ಟಿಕೊಂಡಿರುವ ಓಟ್ ಬ್ಯಾಂಕ್ ನಾಶವಾಗುತ್ತದೆ. ಆಗ ಪಕ್ಷದ ರಾಜಕೀಯ ಅಡಿಪಾಯವೇ ಕುಸಿದು ಬೀಳುತ್ತದೆ. ಹೀಗಾಗಿ ಅವರು ದಿಕ್ಕುಗಾಣ ದಂತಾಗಿದ್ದಾರೆ.
ಜಾತಿ ಜನಗಣತಿಯಿಂದ ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಆರೆಸ್ಸೆಸ್ ವಾದವಾಗಿದೆ. ಅದರ ದೃಷ್ಟಿಯಲ್ಲಿ ಹಿಂದುಗಳು ಮಾತ್ರ ಈ ದೇಶದ ಸಮಾಜ. ಮುಸ್ಲಿಂ, ಕ್ರೈಸ್ತ ಸಮುದಾಯದವರೂ ಕೂಡ ಈ ದೇಶದ ಪ್ರಜೆಗಳೆಂಬುದನ್ನು ಅವರು ಒಪ್ಪುವುದಿಲ್ಲ. ಜಾತಿ ಸೌಹಾರ್ದದ ಹೆಸರಿನಲ್ಲಿ ಪುರೋಹಿತಶಾಹಿಯ ಜನಿವಾರಕ್ಕೆ ಹಿಂದುಳಿದ ವರನ್ನು ಕಟ್ಟಿ ಹಾಕಿ ಅಲ್ಪಸಂಖ್ಯಾತರ ಮೇಲೆ ಹಿಂಸೆಗೆ ಪ್ರಚೋದಿಸುವುದೇ ಸಂಘಪರಿವಾರದ ಹಿಡನ್ ಅಜೆಂಡಾವಾಗಿದೆ.
ಜಾತಿ ಜನಗಣತಿಯಿಂದ ಈ ಹಿಂದೆ ಪರಿಶಿಷ್ಟ ವರ್ಗಗಳ ನಿರ್ದಿಷ್ಟ ಸಂಖ್ಯೆ ದಾಖಲಾಗಿ ಅವರು ಎಚ್ಚೆತ್ತು ಮೀಸಲಾತಿ ಯಂಥ ಸೌಕರ್ಯ ಪಡೆದಂತೆ ಹಿಂದುಳಿದ ಜಾತಿಗಳ ಸಂಖ್ಯಾ ಪ್ರಮಾಣ ದಾಖಲಾಗಿ ಅವರು ಸಾಮಾಜಿಕ ನ್ಯಾಯಕ್ಕಾಗಿ ಗುಡುಗಿದರೆ ಮನುವಾದಿಗಳ ಚಡ್ಡಿ ಕಳಚಿ ಬೀಳುತ್ತದೆ. ಆಗ ಈಶ್ವರಪ್ಪನಂಥವರು ಮುಂಚಿನಂತೆ ಊದಿನ ಕಡ್ಡಿ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ರಾಮಾಜೋಯಿಸರು ಗಾಯತ್ರಿ ಮಂತ್ರ ಪಠಿಸುತ್ತ ಪರಲೋಕ ಚಿಂತನೆಯಲ್ಲಿ ಕಾಲ ಕಳೆಯಬೇಕಾಗುತ್ತದೆ.
ಅಂತಲೇ ಈ ಜನಗಣತಿ ಇವರಿಗೆ ಬೇಡವಾಗಿದೆ. ಂದೂ’ ಎಂಬುದು ಸಂಘ ಪರಿವಾರದ ಭ್ರಾಮಕ ಸೃಷ್ಟಿಯಾಗಿದೆ. ಡಾ. ಅಂಬೇಡ್ಕರ್ ಹೇಳಿದಂತೆ ‘‘ಪ್ರತಿಯೊಬ್ಬ ಹಿಂದುವು ಒಂದು ಜಾತಿಯಲ್ಲಿ ಹುಟ್ಟಿದ್ದಾನೆ ಮತ್ತು ಆ ಜಾತಿಯ ಅವನ ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಜೀವನವನ್ನು ತೊಟ್ಟಿಲಿನಿಂದ ಶ್ಮಶಾನದ ಗುಂಡಿಯವರೆಗೆ ನಿರ್ಧರಿಸುತ್ತದೆ’ ಆದ್ದರಿಂದಲೇ ಜಾತಿ ಎಂಬ ವಾಸ್ತವವನ್ನು ತಳ್ಳಿ ಹಾಕಲು ಸಾಧ್ಯವೇ ಇಲ್ಲ.
ಇದನ್ನು ಕಮ್ಯುನಿಸ್ಟ್ ಪಕ್ಷಗಳು ಈಗ ಒಪ್ಪಿಕೊಂಡಿವೆ.ಬಿಕ್ಕಟ್ಟಿನಿಂದ ಸಂಘಪರಿವಾರ ಪಾರಾಗಬೇಕಾದರೆ ತೊಂಬತ್ತರ ದಶಕದ ಮಂದಿರ ನಿರ್ಮಾಣದಂಥ ವಿವಾದ ಕೆರಳಿಸಿ ದೇಶದಲ್ಲಿ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಬೇಕು. ಹಿಂದುಗಳನ್ನು ಕೇಸರಿ ಬಾವುಟದಡಿ ತರಬೇಕು ಎಂಬುದು ಆರೆಸ್ಸೆಸ್ ಷಡ್ಯಂತ್ರವಾಗಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ. ಅಂಥ ದುಸ್ಸಾಹಸಕ್ಕೆ ಕೈ ಹಾಕಿದರೆ ರಾಜಕೀಯವಾಗಿ ಬಿಜೆಪಿ ಹರಾಕಿರಿ ಮಾಡಿ ಕೊಂಡಂತಾಗುತ್ತದೆ. *
ಹಿಂದೂ ಧರ್ಮ ಮತ್ತು ಗೋ ಮಾಂಸ
Courtesy: VarthaBarathi ಸೋಮವಾರ - ಮೇ -31-2010
ಹಿಂದೂಗಳು ಎಂದಾದರೂ ಗೋಮಾಂಸ ಸೇವಿಸಿದ್ದರೇ ಎಂದು ಪ್ರಶ್ನಿಸಿದಲ್ಲಿ, ಬ್ರಾಹ್ಮಣರಾಗಲೀ ಬ್ರಾಹ್ಮಣೇತರರಾಗಲೀ ಎಲ್ಲ ಹಿಂದೂಗಳು ಒಕ್ಕೊರಲಿನಿಂದ ಇಲ್ಲವೇ ಇಲ್ಲ ಎಂದು ಉತ್ತರಿಸುತ್ತಾರೆ. ಒಂದು ಅರ್ಥದಲ್ಲಿ ಇದು ಸರಿ. ಶತಮಾನಗಳಿಂದಲೂ ಯಾವುದೇ ಒಬ್ಬ ಹಿಂದೂ ಗೋಮಾಂಸ ಸೇವಿಸಿಲ್ಲ ಎಂಬ ಉತ್ತರವನ್ನೇ ಸ್ಪಶ್ಯ ಹಿಂದೂ ಹೇಳಬಯಸಿ ದಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೆ ಬ್ರಾಹ್ಮಣ ವಿದ್ವಾಂಸರು, ‘ಹಿಂದೂಗಳು ಗೋಮಾಂಸವನ್ನು ಸೇವಿಸದೇ ಇದ್ದುದಷ್ಟೇ ಅಲ್ಲ ಸದಾಕಾಲವೂ ಗೋವನ್ನು ಪವಿತ್ರ ಪಶುವಾಗಿಯೇ ಗೌರವಿಸು ತ್ತಿದ್ದರು ಮತ್ತು ಸದಾ ಗೋಹತ್ಯೆಯನ್ನು ವಿರೋಧಿಸುತ್ತಿದ್ದರು’ ಎಂದು ಹೇಳಿದಲ್ಲಿ ಒಪ್ಪಲು ಸಾಧ್ಯವಿಲ್ಲ...
ಋಗ್ವೇದದ ಆರ್ಯರು ಆಹಾರಕ್ಕಾಗಿ ಗೋವನ್ನು ಕೊಂದು ಗೋಮಾಂಸ ಸೇವಿಸುತ್ತಿದ್ದುದು ಋಗ್ವೇದದಿಂದಲೇ ನಿರೂಪಿತವಾಗುತ್ತದೆ. ಋಗ್ವೇಗದದ ಅಧ್ಯಾಯ 10 ಶ್ಲೋಕ 86.14ರಲ್ಲಿ ಇಂದ್ರನು ‘‘ಅವರು ಪ್ರತಿಯೊಬ್ಬರಿಗೆ 35 ವೃಷಭಗಳನ್ನು ಅಡುಗೆ ಮಾಡುತ್ತಾರೆ’’ ಎಂದು ಹೇಳುತ್ತಾನೆ. ಅಧ್ಯಾಯ 10, 91.14ರಲ್ಲಿ ಅಗ್ನಿಯ ಸತ್ಕಾರಕ್ಕಾಗಿ ಅಶ್ವ, ಗೂಳಿ, ವೃಷಭ, ಬರಡು ಗೋವು ಮತ್ತು ಗಂಡು ಕುರಿಗಳನ್ನು ಬಲಿ ನೀಡುತ್ತಿದ್ದರೆಂದು ಹೇಳಲಾಗಿದೆ. ಋಗ್ವೇದದ ಅಧ್ಯಾಯ 10 72.6ರ ಪ್ರಕಾರ ಗೋವನ್ನು ಕತ್ತಿ ಅಥವಾ ಕುಡುಗೋಲಿನಿಂದ ಕೊಲ್ಲಲಾಗುತ್ತಿತ್ತೆಂದು ಹೇಳಲಾಗಿದೆ...
ತೈತ್ತರೀಯ ಬ್ರಾಹ್ಮಣದಲ್ಲಿ ಸೂಚಿಸಲಾಗಿರುವ ಕಾಮ್ಯಾಷ್ಟಿಗಳ ಪೈಕಿ ಗೋವು ಮತ್ತು ವೃಷಭವನ್ನು ಬಲಿ ನೀಡಲು ಸೂಚಿಸಿರುವುದೇ ಅಲ್ಲದೆ ಯಾವ ಯಾವ ದೇವತೆಗಳಿಗೆ ಯಾವ ಯಾವ ಲಕ್ಷಣಗಳುಳ್ಳ ಗೋವು ಮತ್ತು ವೃಷಭಗಳನ್ನು ಅರ್ಪಿಸಬೇಕೆಂದೂ ಸೂಚಿಸಲಾಗಿದೆ. ಹಾಗಾಗಿ ವಿಷ್ಣುವಿಗೆ ಸಮರ್ಪಿಸಲು ಗಿಡ್ಡನೆಯ ಗೋವು, ವೃತ್ರನ ವಿನಾಶಕನಾಗಿರುವ ಇಂದ್ರನಿಗೆ ಜೋಜು ಹಾಕಿರುವ ಕೊಂಬುಗಳನ್ನು ಮತ್ತು ಹಣೆಯ ಮೇಲೆ ಬಿಳಿಯ ಗುರುತು ಹೊಂದಿರುವ ವೃಷಭ, ಪುಷಣನಿಗೆ ಕರಿ ವರ್ಣದ ಗೋವು, ರುದ್ರನಿಗೆ ಕೆಂಪು ವರ್ಣದ ಗೋವು ಇತ್ಯಾದಿ ಇತ್ಯಾದಿ.
ತೈತ್ತರೀಯ ಬ್ರಾಹ್ಮಣದಲ್ಲಿ ಮತ್ತೊಂದು ರೀತಿಯ ಯಜ್ಞ ಪಂಚಶರಧಿಯ ಸೇವಾ ಯಜ್ಞವನ್ನು ಉಲ್ಲೇಖಿಸಲಾಗಿದೆ. ಈ ಯಜ್ಞದ ಅತ್ಯಂತ ಪ್ರಮುಖ ಅಂಶವೆಂದರೆ ಐದು ವರ್ಷ ವಯಸ್ಸಿನ, ಗೂನು ಇಲ್ಲದಿರುವ ಗಿಡ್ಡಗಿರುವ ಹದಿನೇಳು ವೃಷಭಗಳನ್ನು ಮತ್ತು ಮೂರು ವರ್ಷದ ಕೆಳಗಿನ ಗಿಡ್ಡನೆಯ ಹದಿನೇಳು ಎಳೆಯ ಕರುಗಳನ್ನು ದಹಿಸುವುದು...ತಿಥಿಗಳಿಗಾಗಿ ಗೋಹತ್ಯೆ ಮಾಡುವುದು ಎಷ್ಟು ಮಹತ್ವ ಪಡೆದಿತ್ತೆಂದರೆ ಅತಿಥಿಗಳನ್ನು ಗೋಘ್ನ, ಅರ್ಥಾತ್ ಗೋಹಂತಕ ಎಂದೇ ಕರೆಯಲಾಗುತ್ತಿತ್ತು.
ಈ ಗೋಹತ್ಯೆಯನ್ನು ತಡೆಯುವ ಸಲುವಾಗಿ ಅಶ್ವಲಾಯನ ಗೃಹ್ಯ ಸೂತ್ರ (1.24.25) ಅತಿಥಿಗಳು ಬಂದಾಗ ಗೋವನ್ನು ಮುಕ್ತವಾಗಿ ಬಿಟ್ಟುಬಿಡುವುದರ ಮೂಲಕ ಶಿಷ್ಟಾಚಾರದ ಉಲ್ಲಂಘನೆಯನ್ನು ತಪ್ಪಿಸಬಹುದೆಂದು ಹೇಳುತ್ತದೆ.ೋಹತ್ಯೆ ಮತ್ತು ಗೋಮಾಂಸ ಸೇವನೆಯ ಬಗ್ಗೆ ಇಷ್ಟು ಪ್ರಮಾಣದ ಸಾಕ್ಷಧಾರಗಳಿವೆ. ಇವುಗಳಲ್ಲಿ ಯಾವುದನ್ನು ಸತ್ಯವೆಂದು ಒಪ್ಪಿಕೊಳ್ಳಬೇಕು? ಸರಿಯಾದ ದೃಷ್ಟಿಕೋನವೆಂದರೆ ಶತಪಥ ಬ್ರಾಹ್ಮಣ ಮತ್ತು ಅಪಸ್ತಂಭ ಧರ್ಮಸೂತ್ರಗಳ ಪ್ರಮಾಣೀಕರಣವೆಂದು ಹೇಳಬಹುದು.
ಹಿಂದೂಗಳು ಗೋಹತ್ಯೆಯನ್ನು ವಿರೋಧಿಸುತ್ತಿದ್ದರು ಎಂಬ ಅಭಿಪ್ರಾಯವು ಅತಿಯಾದ ಗೋಹತ್ಯೆಯ ವಿರುದ್ಧ ಧರ್ಮಶಾಸನವಾಗಿತ್ತೇ ಹೊರತು ಗೋಹತ್ಯೆ ನಿಷೇಧದ ವಿರುದ್ಧವಲ್ಲ ಎಂಬ ಅಭಿಪ್ರಾಯವನ್ನು ಈ ಎರಡು ಗ್ರಂಥಗಳು ವ್ಯಕ್ತಪಡಿಸುತ್ತವೆ. ಹಾಗಾಗಿ ಈ ದೃಷ್ಟಿಕೋನವನ್ನು ಒಪ್ಪಬಹುದಾಗಿದೆ. ಈ ಧರ್ಮಶಾಸನಗಳೇ ಗೋ ಹತ್ಯೆ ಮತ್ತು ಗೋಮಾಂಸ ಸೇವನೆ ಸಾಮಾನ್ಯವಾಗಿತ್ತೆಂಬ ಅಂಶವನ್ನು ನಿರೂಪಿಸುತ್ತದೆ. ಈ ಧರ್ಮಶಾಸನಗಳ ಹೊರತಾಗಿಯೂ ಗೋಹತ್ಯೆ ಮತ್ತು ಗೋಮಾಂಸ ಸೇವನೆ ಮುಂದುವರಿದೇ ಇತ್ತು.
ಈ ಧರ್ಮಶಾಸನಗಳನ್ನು ಬಹುತೇಕ ನಿರ್ಲಕ್ಷಿಸಿರುವುದು ಆರ್ಯರ ಮಹಾನ್ ಋಷಿ ಯಾಜ್ಞವಲ್ಕನ ಪ್ರಕರಣದಲ್ಲಿ ವ್ಯಕ್ತವಾಗು ತ್ತದೆ. ಯಾಜ್ಞವಲ್ಕನು ಒಮ್ಮೆ ‘‘ನಾನು ಅದನ್ನು ತಿನ್ನುತ್ತೇನೆ ಆದರೆ ಅದು ಎಳೆಯದಾಗಿರಬೇಕು’’ ಎಂದು ಹೇಳುವುದು.ಂದು ಕಾಲಘಟ್ಟದಲ್ಲಿ ಹಿಂದೂಗಳು ಗೋಹತ್ಯೆ ಮಾಡುತ್ತಿದ್ದರು ಹಾಗೂ ಗೋಮಾಂಸ ಸೇವಿಸುತ್ತಿದ್ದರು ಎಂಬ ಸಂಗತಿಯನ್ನು ಬೌದ್ಧ ಸೂತ್ರಗಳಲ್ಲಿ ಉಲ್ಲೇಖವಾಗಿರುವ ವೇದೋತ್ತರ ಕಾಲದ ಮತ್ತು ಬ್ರಾಹ್ಮಣೋತ್ತರ ಕಾಲದ ಯಜ್ಞಗಳ ವಿವರಣೆಗಳಿಂದ ಸ್ಪಷ್ಟವಾಗಿ ಗ್ರಹಿಸಬಹುದು.
ಗೋವು ಮತ್ತಿತರ ಪ್ರಾಣಿಗಳ ಹತ್ಯೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದ್ದುದೂ ಅಷ್ಟೇ ಸತ್ಯ. ಧರ್ಮದ ಹೆಸರಿನಲ್ಲಿ ಬ್ರಾಹ್ಮಣರು ವಿವಿಧ ಸನ್ನಿವೇಶಗಳಲ್ಲಿ ಹತ್ಯೆ ಮಾಡಿದ ಗೋವುಗಳ ಸಂಖ್ಯೆಯನ್ನು ನಿಖರವಾಗಿ ಹೇಳುವುದು ದುಸ್ತರವಾಗುತ್ತದೆ. ಆದರೆ ಬೌದ್ಧ ಸಾಹಿತ್ಯದಲ್ಲಿ ಉಲ್ಲೇಖವಾಗಿರುವ ದಾಖಲೆಗಳಿಂದ ಗೋ ಹತ್ಯೆಯ ಪ್ರಮಾಣವನ್ನು ಅಲ್ಪಮಟ್ಟಿಗೆ ಊಹಿಸಬಹುದು. ನಿದರ್ಶನ ರೂಪದಲ್ಲಿ ಕುತದಂತ ಸೂತ್ರವನ್ನು ಉಲ್ಲೇಖಿಸಬಹುದು. ಬುದ್ಧನು ವಿರೋಧಿಸುತ್ತಾನೆ. ಹಾಸ್ಯ ಮಿಶ್ರಿತ ಅಣುಕು ದನಿಯಲ್ಲಿ ಬುದ್ಧನು ವೇದಕಾಲದ ಯಜ್ಞಗಳನ್ನು ಕುರಿತು ಉತ್ತಮ ನಿದರ್ಶನವನ್ನು ಹೀಗೆ ಒದಗಿಸತ್ತಾನೆ.
ಮುಂದುವರಿಯುತ್ತಾ, ಓ ಬ್ರಾಹ್ಮಣನೆ ಯಜ್ಞದಲ್ಲಿ ಯಾವುದೇ ವೃಷಭದ ಹತ್ಯೆಯಾಗಿರಲಿಲ್ಲ ಅಥವಾ ಮೇಕೆಗಳ, ಪಕ್ಷಿಗಳ, ಕೊಬ್ಬಿದ ಹಂದಿಗಳ ಅಥವಾ ಯಾವುದೇ ರೀತಿಯ ಜೀವಸಂಕುಲಗಳ ಹತ್ಯೆ ನಡೆದಿರಲಿಲ್ಲ. ಸ್ತಂಭಗಳನ್ನು ನಿರ್ಮಿಸಲು ಯಾವುದೇ ವೃಕ್ಷಗಳನ್ನು ಕಡಿದಿರಲಿಲ್ಲ. ಯಜ್ಞ ಪೀಠವನ್ನು ರಕ್ಷಿಸಲು ಯಾವುದೇ ದರ್ಭೆ ಹುಲ್ಲನ್ನು ಉಪಯೋಗಿಸಲಾಗಿರಲಿಲ್ಲ. ಗುಲಾಮರು, ಸುದ್ದಿವಾಹಕರು ಮತ್ತು ಕೆಲಸಗಾರರನ್ನು ಸಲಾಕೆಗಳಿಂದಾಗಲೀ, ಭೀತಿಯಿಂದಾ ಗಲೀ ನಿಯಂತ್ರಿಸಲಾಗಿರಲಿಲ್ಲ ಅಥವಾ ಈ ಕೆಲಸಗಾರರು ಕಣ್ಣೀರು ಸುರಿಸುತ್ತಾ ಕೆಲಸ ನಿರ್ವಹಿಸುತ್ತಲೂ ಇರಲಿಲ್ಲ.
ಮತ್ತೊಂದೆಡೆ ಕುತದಂತನು ತಾನು ಮತಾಂತರಗೊಂಡಿದಕ್ಕಾಗಿ ಬುದ್ಧನಿಗೆ ಅಭಿನಂದಿಸುತ್ತಾ ಇಂತಹ ಯಜ್ಞಗಳಲ್ಲಿ ಸಂಭವಿಸುತ್ತಿದ್ದ ಪ್ರಾಣಿ ಬಲಿಯ ಅಗಾಧತೆಯನ್ನು ಕುರಿತು ಹೀಗೆ ಹೇಳುತ್ತಾನೆ.ನಾನು ಗೌರವಯುತ ಗೌತಮನನ್ನು ಮಾರ್ಗದರ್ಶಿಯಾಗಿ ಸ್ವೀಕರಿಸುತ್ತಾ ಆತನ ತತ್ತ್ವ ಮತ್ತು ಆದೇಶವನ್ನು ಪಾಲಿಸುತ್ತಾ, ಗೌರವಯುತ ಗೌತಮನು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿ ಎಂದು ಪ್ರಾರ್ಥಿಸುತ್ತೇನೆ.
ನಾನು ಪ್ರಥಮ ದಿನದಿಂದಲೇ ನನ್ನ ಜೀವನಪರ್ಯಂತ ಆತನನ್ನು ನನ್ನ ಮಾರ್ಗದರ್ಶಿಯಾಗಿ ಸ್ವೀಕರಿಸಿದ್ದೇನೆ. ಗೌತಮನೇ, ನಾನೇ ಖುದ್ದಾಗಿ ಏಳು ನೂರು ವೃಷಭಗಳನ್ನು, ಏಳು ನೂರು ಹೋರಿಗಳನ್ನು, ಏಳು ನೂರು ಎಳೆಯ ಕರುಗಳನ್ನು, ಏಳು ನೂರು ಮೇಕೆಗಳನ್ನು ಮತ್ತು ಏಳು ನೂರು ಗಂಡು ಕುರಿಗಳನ್ನು ಮುಕ್ತಗೊಳಿಸುತ್ತೇನೆ. ಈ ಜಾನುವಾರುಗಳಿಗಾಗಿ ನಾನು ಪ್ರಾಣವನ್ನೂ ತೆರಲು ಸಿದ್ಧನಿದ್ದೇನೆ. ಅವುಗಳು ಹುಲ್ಲು ತಿನ್ನಲಿ, ಶುದ್ಧ ನೀರು ಕುಡಿಯಲಿ ತಂಪುಗಾಳಿ ಅವುಗಳ ಸುತ್ತ ಸುಳಿದಾಡಲಿ.
-ಡಾ. ಬಿ.ಆರ್. ಅಂಬೇಡ್ಕರ್
'ಗಾಂಧಿ' ಹೋರಾಟ ಯಾರ ವಿರುದ್ದ
`UÁ0¢ü' ºÉÆÃgÁl 0iÀiÁgÀ «gÀÄzÀÞ
C0¨ÉÃqÀÌgï, J0zÀgÉ EwºÁ¸ÀzÀ GzÀÝPÀÆÌ ¸À0WÀµÀðzÀ ºÉ¸ÀgÀÄ. D ¸À0WÀµÀð F zÉñÀzÀ ¸ÁÛ¦vÀ »vÁ¸ÀQÛUÀ¼À «gÀÄzÀÝ,eÁwÃ0iÀÄ ªÀÄ£À¸ÀÄìUÀ¼À «gÀÄzÀÞ, dqÀÄØUÀnÖzÀ ªÀåªÀ¸ÉÜ0iÀÄ «gÀÄzÀÞ. C0vÀºÀ ¸ÁÛ¦vÀ »vÁ¸ÀQÛUÀ¼ÀÄ ªÀåªÀ¸ÉÜ »ÃUÉ EgÀ° J0zÀÄ §0iÀĸÀÄvÀÛzÉ. CªÀÅUÀ½UÉ §zÀ¯ÁªÀuÉ ¨ÉÃQ®è. 0iÀiÁPÉ0zÀgÉ §zÀ¯ÁªÀuÉ J°è vÀªÀÄä C¹ÛvÀéPÉÌ ¸À0ZÀPÁgÀ vÀ0zÉÆqÀÄØvÀÛzÉ0iÉÆÃ J0§ ¨sÀ0iÀÄ.
¸ÁܦvÀ »vÁ¸ÀQÛUÀ¼À E0vÀºÀ zsÉÆÃgÀuÉ JgÀqÀÄ ¸Á«gÀ ªÀµÀðUÀ½0zÀ F zÉñÀªÀ£ÀÄß `»ÃUÉ0iÉÄÃ' EnÖzÉ. eÁw¥ÀzÀÝw, ªÀÄ£ÀĪÁ¢ ±ÉæÃtÂÃPÀÈvÀ ªÀåªÀ¸ÉÜ C§â¨Áâ F ¥ÀzÀUÀ¼À£ÀÄß ºÉý PÉý £ÀªÀÄä £Á°UÉ ªÀÄvÀÄÛ Q«UÀ¼À vÀÆvÀÄ ©zÀÄÝ ºÉÆÃVªÉ. DzÀgÉ ¸ÁܦvÀ »vÁ¸ÀQÛUÀ½UÉ EªÀÅ `¸À«gÀÄa' , PÀuÁð£À0zÀ! E0vÀºÀ D£À0zÀªÀ£ÀÄß, gÀÄa0iÀÄ£ÀÄß ºÁUÉ0iÉÄà G½¸À®Ä 1885gÀ°è ¸ÁܦvÀªÁzÀ ªÀÄvÉÆÛ0zÀÄ ¸À0¸ÉÜ0iÉÄà PÁ0UÉæ¸ï. PÁ0UÉæ¸ï ºÁUÉ0zÁPÀët EwºÁ¸ÀPÁgÀgÀÄ ¸ÁévÀ0vÀæ÷å ºÉÆÃgÁlªÀ£Éßà CzÀgÀ ªÉÄÃ¯É DgÉÆÃ¦¸ÀÄvÁÛgÉ. DzÀgÉ CzÀÄ 0iÀiÁgÀ «gÀÄzÀÞ? «zÉò0iÀÄgÀ «gÀÄzÀÞ,©ænµÀgÀ «gÀÄzÀÞ ¸ÀézÉò C¸ÀàöȱÀgÀ ¥ÀgÀ, »0zÀĽzÀªÀgÀ ¥ÀgÀ R0rvÀ CzÀgÀ ºÉÆÃgÁl ¸ÉÆ£Éß! 0iÀiÁPÉ0zÀgÉ PÁ0UÉæ¸À£ÀÄß PÁqÀĪÀÅzÀÄ ªÀÄvÀÛzÉà ¸ÁܦvÀ »vÁ¸ÀQÛ.
EwºÀ¸ÀzÀ°è E0vÀºÀ ¸ÁܦvÀ »vÁ¸ÀQÛUÀ¼À «gÀÄzÀÞ ºÉÆÃgÁrzÀ zÉÆqÀØ ¥ÀqÉ0iÉÄà £ÀªÀÄä PÀtÚªÀÄÄ0¢zÉ . ªÀĺÁvÀä eÉÆåÃw ¨Á¥sÀůÉ,±ÁºÀĪÀĺÀgÁeï,£Á®ér PÀȵÀÚgÁd MqÉ0iÀÄgï,¥Éj0iÀiÁgï gÁªÀĸÁé«Ä £Á0iÀÄÌgï,C0¨ÉÃqÀÌgï ªÀÄÄ0vÁzÀªÀgÀÄ. F ¥ÀnÖ0iÀÄ£ÀÄß UÀªÀĤ¹zÀgÉ EªÀgÁågÀÆ PÁ0UÉæ¸Àß »£É߯ɬÄ0zÀ §0zÀªÀgÀ®è J0§ÄzÀÄ vÀPÀët Cj«UÉ §gÀÄvÀÛzÉ. CPÀ¸Áävï EzÀÝgÀÆ £À0vÀgÀ CªÀgÀÄ CzÀ£ÀÄß vÉÆgÉzÀÄ ¨ÉÃgÉ ¥ÀPÀëUÀ¼À , ZÀ¼ÀªÀ½UÀ¼À ªÀÄÄ0ZÀÆtÂUÉ §0¢gÀĪÀÅzÀÄ PÀ0qÀħgÀÄvÀÛzÉ. GzÁºÀgÀuÉ0iÀiÁV ¥Éj0iÀiÁgï ¤®ÄèvÁÛgÉ. ªÀĺÁvÀäUÁ0¢ü0iÀĪÀgÀ£ÀÄß PÀÆqÀ C0vÀºÀ ¸ÁܦvÀ »vÁ¸ÀQÛ0iÀĝɯè0zÁzÀ C¸ÀàöȱÀvÉ0iÀÄ «gÀÄzÀÞ ºÉÆÃgÁrzÀªÀgÉ£ÀÄßvÁÛgÉ. ªÀĺÁvÀäUÁ0¢ü0iÀĪÀgÀ `F ºÉÆÃgÁl' zÀÄ0qÀÄ ªÉÄÃf£À ¸À¨sÉUÀ¼À £À0vÀgÀ, ¥ÀÇ£Á M¥Àà0zÀzÀ £À0vÀgÀ, ¥ÁægÀ0¨sÀªÁVgÀĪÀÅzÀ£ÀÄß £ÉÆÃrzÀgÉ zÀÄ0qÀÄ ªÉÄÃf£À ¸À¨sÉUÀ¼À°è, ¥ÀÇ£Á M¥Àà0zÀzÀ°è C¸ÀàöȱÀgÀ «gÀÄzÀÞ CxÁðvï C0¨ÉÃqÀÌgÀgÀ «gÀÄzÀÞªÉà ºÉÆÃgÁrzÀ WÀl£É0iÀÄ£ÀÄß ªÀÄgÉ ªÀiÁZÀ®Ä CxÀªÁ C¸ÀàöȱÀgÀ PÀtÂÚUÉ ªÀÄuÉÚgÀazÀ UÁ0¢ü F `¥ÀæºÀ¸À£À' ±ÀÄgÀĪÀiÁrzÀgÉ0zÀÄ PÁtÄvÀÛzÉ.
1869gÀ°è d¤¹zÀ UÁ0¢üf 1928gÀ zÀÄ0qÀĪÉÄÃf£À ¥ÀjµÀvï, 1932gÀ ¥ÀÇ£Á M¥Àà0zÀzÀªÀgÉUÉ C0zÀgÉ CªÀjUÉ CgÀªÀvÀÄÛ ªÀµÀðUÀ¼ÀÄ vÀÄ0§ÄªÀªÀgÉUÉ CªÀjUÉ C¸ÀàöȱÀvÉ «gÀÄzÀÞ ºÉÆÃgÁrzÀ 0iÀiÁªÀÅzÉà GzÁºÀgÀuÉ PÀ0qÀħgÀĪÀÅ¢®è. £À0vÀgÀªÁzÀgÀÆ C¸ÀàöȱÀgÀ£ÀÄß `ºÀgÀd£À'gÉ0zÀÄ PÀgÉ¢zÀÄÝ, ºÀjd£À ¸ÉêÀPÀ ¸À0WÀUÀ¼À£ÀÄß vÉgÉ¢zÀݵÉÖà CªÀgÀ ¸ÁzsÀ£É. DzÀgÉ D ¸À0WÀzÀ ªÀÄÆ®PÀ zÀ°vÀjUÉ PÉgÉUÀ½UÉ, zÉêÀ¸ÁÜ£ÀUÀ½UÉ, ±Á¯ÉUÀ½UÉ ¥ÀæªÉñÀ zÉÆgÀQ¹PÉÆlÖ0vÀºÀ, ¨sÀÆ«Ä ºÀ0aPÉ0iÀÄ0vÀºÀ 0iÀiÁªÀÅzÉà zÉÆqÀØ ªÀÄlÖzÀ ºÉÆÃgÁlªÀ£ÀÄß ªÀĺÁvÀäUÁ0¢ü0iÀĪÀgÀÄ ªÀiÁqÀ°®è. DzÀgÉ M0zÀ0vÀÄ ªÀiÁrzÀgÀÄ. UÁ0¢ü F ¸À0WÀUÀ¼À ªÀÄÆ®PÀ C¸ÀàöȱÀgÀ£ÀÄß PÁ0UÉæ¸ï£À ±Á±ÀévÀ Nmï¨Áå0Pï DV ªÀiÁrzÀÝgÀÄ. J¯ÉÆèà CªÀgÀ GzÉÝñÀ EµÉÖÃDVvÀÄÛ PÁtÄvÀÛzÉ. ºÁVzÀÝgÉ C¸ÀàöȱÀgÀ GzÁÞgÀzÀ ºÉ¸ÀgÀħ0zÁUÀ CªÀgÀ ºÉ¸ÀgÀÄ ºÉüÀĪÀÅzÀÄ ¸ÀtÚ ¸ÀļÀÄî J0zɤ¸ÀÄvÀÛzÉ!
EzÀ£É߯Áè FUÀ 0iÀiÁPÉ ºÉüÀ¨ÉÃPÁ¬ÄvÉ0zÀgÉ ºÁ° PÁ0UÉæ¸ï£À 0iÀÄĪÀgÁd gÁºÀįïUÁ0¢ü 0iÀĪÀgÀÄ PÀÆqÁ ªÀĺÁvÀäUÁ0¢ü0iÀĪÀgÀ ºÁ¢0iÀįÉèà ¸ÁUÀÄwÛzÁÝgÉ. ºÁUÀ0vÀ gÁºÀįïUÁ0¢ü0iÀĪÀgÀÄ C¸ÀàöȱÀjUÉ CxÁðvï zÀ°vÀjUÉ ºÉƸÀ ºÉ¸ÀgÀÄ ¤ÃqÀÄwÛzÁÝgÉ. ºÉƸÀ ¸ÉêÀPÀ ¸À0WÀUÀ¼À£ÀÄß ¸Áܦ¸ÀÄwÛzÁÝgÉ J0zÀxÀðªÀ®è.(D PÉ®¸ÀªÀ£ÀÄß UÁ0¢ü J0zÉÆÃ ªÀiÁr ªÀÄÄV¹ºÉÆÃVzÁÝgÉ!) ¥Àæ¸ÀÄÛvÀPÉÌ ¸À0§0¢ü¹zÀ0vÉ zÀ°vÀgÀ ©Ã¢UÀ½UÉ £ÀÄUÀÄΪÀÅzÀÄ, CªÀgÀ ªÀÄ£ÉUÀ¼À°è ªÁ¸ÀÛªÀåºÀÆqÀĪÀÅzÀÄ, C0¨ÉÃqÀÌgï ¥ÀæwªÉÄUÉ ªÀiÁ¯Á¥ÀðuÉ ªÀiÁqÀĪÀÅzÀÄ EvÁå¢ ªÀiÁqÀÄwzÁÝgÉ. EµÉÖ¯Áè ªÀiÁrzÀ£À0vÀgÀ CªÀgÀÄ ªÁ¥Á¸ï ªÀÄ£ÉUÉ ºÉÆÃV 0iÀiÁªÀ ¥Àj ±ÀÄaUÉÆ½¹PÉÆ¼ÀÄîvÁÛgÉ J0§ §UÉÎ 0iÀiÁªÀÅzÉà ªÀgÀ¢ EzÀĪÀgÉUÉ PÀ0qÀħ0¢®è! ¥Áæ0iÀıÀB »qÀ£ï PÁåªÉÄgÁ EzÀÝgÉ gÁºÀįïUÁ0¢ü0iÀĪÀgÀ F `£ÁlPÀ'zÀ £ÉÊdvÉ §0iÀİUÉ §gÀ§ºÀÄzÉÆÃ J£ÉÆÃ?
EgÀ°, gÁºÀįïUÁ0¢ü0iÀĪÀgÀÄ F £ÁlPÀªÀ£ÀÄß GvÀÛgÀ¥ÀæzÉñÀzÀ°è0iÉÄà 0iÀiÁPÉ ªÀiÁqÀÄwzÁÝgÉ? ¨ÉÃgÉ®Æè 0iÀiÁPÉ ªÀiÁqÀÄwÛ®è? ªÀiÁzsÀåªÀÄUÀ¼ÀÄ F §UÉÎ GvÀÛgÀ¥ÀæzÉñÀ gÁºÀįïgÀ "PÁ0iÀÄðPÉëÃvÀæ", `«µÀ£ï-2012' J0zÉ®è GvÀÛgÀPÉÆqÀÄwÛªÉ. ºÁVzÀÝgÉ `«µÀ£ï-2012' C0zÀgÉ K£ÀÄ? GvÀÛgÀ ¥ÀæzÉñÀzÀ ªÀÄÄ0§gÀĪÀ C¸É0©è ZÀÄ£ÁªÀuÉ. C°è ¸ÉÆÃ°¸À¨ÉÃPÁVgÀĪÀÅzÀÄ 0iÀiÁgÀ£ÀÄß? ªÀiÁ0iÀiÁªÀw0iÀĪÀgÀ£ÀÄß. DPÉ 0iÀiÁgÀÄ? zÀ°vÀ ªÀÄ»¼É, zÀ°vÀgÀ ªÀÄ£ÉUÀ¼À°è ªÁ¸ÀÛªÀåªÀiÁqÀĪÀ gÁºÀįï 0iÀiÁgÀ GzÁÞgÀªÀ£ÀÄß §0iÀĸÀÄwÛzÁÝgÉ? zÀ°vÀgÀ GzÁÞgÀªÀ£ÀÄß ºÁVzÀÝgÉ zÀ°vÀ ªÀÄ»¼É0iÉÆ§â¼ÀÄ £ÉªÀÄä¢0iÀiÁV D¼À° ©r. CªÀjUÉ 0iÀiÁPÉ QjQj ¤ÃqÀĪÀÅzÀÄ? 0iÀiÁPÉ0zÀgÉ GvÀÛgÀ¥ÀæzÉñÀªÀ£ÀÄß ºÉÆgÀvÀÄ¥Àr¹ zÉñÀzÀ 0iÀiÁªÀÅzÉà gÁdåzÀ®Æè ºÁ° zÀ°vÀgÉÆÃªÀðgÀÄ ªÀÄÄRåªÀÄ0wæ0iÀiÁV PÁ0iÀÄ𠤪Àð»¸ÀÄwÛ®è. »ÃVgÀĪÁUÀ ºÁ° KPÉÊPÀ zÀ°vÀ ªÀÄÄRåªÀÄ0wæ0iÀiÁzÀ CzÀgÀ®Æè zÀ°vÀ ªÀÄ»¼É0iÀiÁzÀ ªÀiÁ0iÀiÁªÀw0iÀĪÀgÀÄ £ÉªÀÄ䢬Ä0zÀ gÁdåªÁ¼ÀĪÀÅzÀÄ gÁºÀįïUÁ0¢ü0iÀĪÀjUÉ EµÀÖ«®èªÉÃ? ºÁVzÀÝgÉ zÀ°vÀgÀ ªÀÄ£ÉUÀ¼À°è ªÁ¸ÀÛªÀå ºÀÆqÀĪÀ gÁºÀįïgÀ §zÀÞvÉ0iÀiÁzÀgÀÄ J0vÀºÀzÀÄÝ? R0rvÀ,CªÀgÀ zÀ°vÀgÀ GzÁÞgÀzÀ ¥ÁæªÀiÁtÂPÀvÉ0iÀÄ §UÉÎ ¸À0±À0iÀÄ §0zÉà §gÀÄvÀÛzÉ. EzÀÄ zÀ°vÀgÀ£ÀÄß zÀ°vÀgÀ PÁ0iÀÄð ¸ÁÜ£ÀzÀ¯Éèà ªÀ0a¸ÀĪÀ PÀ¥Àl£ÁlPÀ«gÀ§ºÀÄzÁ J0§ ¸À0±À0iÀÄ PÀÆqÀ PÁrzÀgÉ CZÀÑj K¤®è. M0zÀxÀðzÀ°è EzÀÄ C¸ÀàöȱÀvÉ0iÀÄ §»gÀ0UÀ DZÀgÀuÉ EgÀ§ºÀÄzÁ J0zɤ¸ÀÄvÀÛzÉ. ªÀiÁ0iÀiÁªÀw 0iÀĪÀjUÉ QgÀÄPÀļÀ ¤ÃqÀÄwÛgÀĪÀ gÁºÀįïUÁ0¢ü 0iÀĪÀgÀ «gÀÄzÀÞ _________ zËdð£Àå.. PÁ0iÉÄÝ0iÀÄr 0iÀiÁPÉ PÉøÀÄ ºÁPÀ¨ÁgÀzÀÄ? J0§ ¥Àæ±Éß.....
ºÁUÉãÁzÀgÀÆ gÁºÀįïUÁ0¢ü0iÀĪÀjUÉ zÀ°vÀgÀ£ÀÄß PÀ0qÀgÉ CµÀÄÖ ¦æÃw EzÉ J£ÀÄߪÀÅzÁzÀgÉ ªÉÆzÀ®Ä vÁ£ÀÄ DqÀ½vÀ ªÀiÁqÀÄwÛgÀĪÀ gÁdåUÀ¼À°è PÀ¤µÀ× JgÀqÀÄ gÁdåUÀ¼À°è zÀ°vÀgÀ£ÀÄß ªÀÄÄRåªÀÄ0wæ0iÀiÁV £ÉëĸÀ°. 0iÀiÁªÀÇzÀÄ ¨ÉÃqÀ, PÀ¼ÉzÀ ªÀµÀð ¥ÀPÀÌzÀ D0zsÀæzÀ°è ªÉÊ.J¸ï.gÁd±ÉÃRgÀ gÉrØ0iÀĪÀgÀÄ CPÁ°PÀ ªÀÄgÀt ºÉÆ0¢zÁUÀ gÁºÀįïUÁ0¢ü0iÀĪÀgÀÄ " £À£ÀUÉ zÀ°vÀgÀ£ÀÄß PÀ0qÀgÉ vÀÄ0¨Á ¦æÃw. DzÀÝj0zÀ zÀ°vÀ£ÉÆÃªÀð£À£ÀÄß ªÀÄÄRåªÀÄ0wæ ªÀiÁr" J0zÀÄ vÀ£Àß vÁ¬Ä0iÀĪÀjUÉ ²¥sÁgÀ¸ÀÄì ªÀiÁqÀ§ºÀÄ¢vÀÛ®è. 0iÀiÁPÉ0zÀgÉ ºÁ°...gÀ£ÀÄß ªÀÄÄRåªÀÄ0wæ ªÀiÁrzÀÝgÉ CzÀPÉÌ 0iÀiÁªÀÅzÉà jÃw0iÀÄ £ÀµÀÖªÁUÀÄwÛgÀ°®è. »ÃVgÀĪÁUÀ gÁºÀÄ¯ï ºÁUÉÃPÉ ªÀiÁqÀ°®è?
¤dPÀÆÌ ©eɦ C¢üPÁgÀzÀ°ègÀĪÀ gÁdåUÀ¼À°è C0zÀgÉ PÀ£ÁðlPÀ, UÀÄdgÁvï, ªÀÄzsÀå¥ÀæzÉñÀ,bÀwÛøïUÀqsÀ F gÁdåUÀ¼À°è zÀ°vÀgÀ ¹Üw GvÀÛgÀ¥ÀæzÉñÀ¸À zÀ°vÀjV0vÀ zÀ0iÀĤÃ0iÀĪÁVzÉ. zËdð£Àå ªÉÄÃgÉ «ÄÃjzÉ. gÁºÀįï 0iÀiÁPÉ E°è ºÉÆÃgÁl ªÀiÁqÀÄwÛ®è?(£É£À¦gÀ° E®Æè PÀÆqÀ ªÀÄÄ0¢£À ¢£ÀUÀ¼À°è ZÀÄ£ÁªÀuÉ §gÀ°zÉ!) 0iÀiÁPÉ0zÀgÉ EªÀgÁågÀÆ PÀÆqÀ zÀ°vÀgÀ®è CzÀPÉÌ. ºÁUÁzÀgÉ gÁºÀįïgÀ ºÉÆÃgÁl 0iÀiÁgÀ «gÀÄzÀÞ? ªÀiÁ0iÀiÁªÀw0iÀĪÀgÀ «gÀÄzÀÞªÉÇÃ? zÀ°vÀgÀ «gÀÄzÀÞªÉÇÃ? zÀ°vÀgÀ ªÀÄ£ÉUÀ¼À°è ªÀÄ®UÀÄvÁÛ, CªÀgÀ eÉÆvÉ0iÀİè0iÉÄà EgÀÄvÁÛ, CªÀgÀzÉà «gÀÄzÀÞ CªÀgÀzÉà £Á0iÀÄQ0iÀÄ «gÀÄzÀÞ!
M0zÀxÀðzÀ°è ªÀĺÀvÀäUÁ0¢ü0iÀĪÀgÀÄ PÀÆqÀ ªÀiÁrzÀÄÝ EzÀ£ÉßÃ! ºÀjd£ÀgÀ eÉÆvÉ ¨ÉgÉ0iÀÄÄvÁÛ, ºÀjd£À ¸ÉêÀPÀ ¸À0WÀUÀ¼À£ÀÄß PÀlÄÖvÁÛ, ºÀjd£ÀgÀ, PÀë«Ä¹ C¸ÀàöȱÀgÀ £Á0iÀÄPÀ£À «gÀÄzÀÞªÉà ºÉÆÃgÁrzÀÄÝ. £É£À¦gÀ° C0zÀÄ EwºÁ¸À CxÁðvï zÀ°vÀgÀ EwºÁ¸À PÀtÄÚªÀÄÄaÑvÀÄ. CzÀPÉÌ ªÀĺÁvÀäUÁ0¢ü0iÀĪÀgÀ vÀ0vÀæUÀ¼ÀÄ zÀ°vÀjUÉ CxÀðªÁV®è. DzÀgÉ E0zÀÄ EwºÁ¸À PÀtÄÚ vÉgÉ¢zÉ. C0¨ÉÃqÀÌgïgÀªÀgÀÄ `EwºÁ¸À ªÀÄgÉvÀªÀgÀÄ EwºÁ¸À ¸Àȶ׸À¯ÁgÀgÀÄ' J0zÀÄ zÀ°vÀjUÉ ¥ÁoÀ ºÉý ºÉÆÃVzÁÝgÉ. zÀ°vÀgÀÄ ªÀĺÁvÀäUÁ0¢ü0iÀĪÀgÀ `EwºÁ¸ÀªÀ£ÀÄß' ªÀÄgÉw®è. »ÃVgÀĪÁUÀ gÁºÀįïUÁ0¢ü0iÀĪÀj0zÀ CzÉà EwºÁ¸ÀzÀ ¥ÀÅ£ÀgÁªÀvÀð£É0iÀÄ£ÀÄß ºÉÃUÉ vÁ£É ¸À»¹PÉÆ¼ÀÄîvÁÛgÉ? GUÀæªÁV wgÀÄV ©Ã¼ÀÄvÁÛgÉ CµÉÖ.