Tuesday, June 1, 2010

ಜಾತಿ ಜನಗಣತಿ: ಬಿಜೆಪಿಗೆ ಪ್ರಾಣ ಸಂಕಟ

eÁw d£ÀUÀtw ©eɦUÉ ¥Áæt ¸ÀAPÀl

Courtesy: VarthaBarathi ಸೋಮವಾರ - ಮೇ -31-2010

ಸನತ್ ಕುಮಾರ ಬೆಳಗಲಿ

ಜಾತಿ ಆಧಾರಿತ ಜನಗಣತಿಯ ಪ್ರಸ್ತಾಪ ದೇಶದಲ್ಲಿ ವಿವಾದದ ಅಲೆಯನ್ನೆಬ್ಬಿಸಿದೆ. ಈ ಹಿಂದೆ ಬ್ರಿಟಿಷ್ ಆಡಳಿತವಿದ್ದಾಗ 1901 ಹಾಗೂ 1931ರಲ್ಲಿ ಮಾತ್ರ ಜನಸಂಖ್ಯೆಯ ವಿಂಗಡಣೆಗೆ ಹೊಸತತ್ವವನ್ನು ಅಳವಡಿಸಿ ಜನಗಣತಿ ಮಾಡಲಾಗಿತ್ತು. ಆಗ ಇಂಥ ಜಾತಿ ಆಧಾರಿತ ಜನಗಣತಿಯನ್ನು ಬಲವಾಗಿ ವಿರೋಧಿಸಿದ್ದ ಮೇಲ್ಜಾತಿ ಹಿಂದೂಗಳು ಈಗಲೂ ಅಪಸ್ವರ ತೆಗೆದಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಉಚ್ಚ ಜಾತಿಗಳನ್ನು ಪ್ರತಿನಿಧಿಸು ತ್ತಿರುವ ಆರೆಸ್ಸೆಸ್ ಇಂಥ ಜಾತಿ ಆಧಾರಿತ ಜನಗಣತಿಯನ್ನು ಬಲವಾಗಿ ವಿರೋಧಿಸಿದೆ. ಇದರಿಂದ ದಲಿತರಂತೆ ಹಿಂದುಳಿದವರೂ ಸಿಡಿದೆದ್ದು ನಿಂತುಬಿಟ್ಟಿದ್ದಾರೆ. ತನ್ನ ‘ಹಿಂದೂರಾಷ್ಟ್ರ’ ಅಜೆಂಡಾ ಎಲ್ಲಿ ಎಗರಿ ಬೀಳುತ್ತದೋ ಎಂಬ ಆತಂಕ ಅದಕ್ಕಿದೆ.

ಇಂಥ ಆತಂಕದಿಂದಲೇ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಲು ಸಂಘ ಪರಿವಾರ ಕಮಂಡಲ ಅಸ್ತ್ರವನ್ನು ಪ್ರಯೋಗಿಸಿತ್ತು. ಹಿಂದುಳಿದ ವರ್ಗ ಗಳಿಗೆ ಮೀಸಲಾತಿ ಒದಗಿಸುವ ಈ ಆಯೋಗದ ವರದಿಯ ಜಾರಿ ವಿರುದ್ಧ ರಾಮಜನ್ಮ ಭೂಮಿ ಆಂದೋಲನವನ್ನು ಆರಂಭಿಸಿತು. ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ರಥಯಾತ್ರೆ ನಡೆಸಿದರು. ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶಗಳ ಹಿಂದುಳಿದ ಜನವರ್ಗ ಗಳು ರಥಯಾತ್ರೆಯ ವಂಚನೆಯ ಬಲೆಗೆ ಹೆಚ್ಚಿನ ಪ್ರಮಾಣದಲ್ಲಿ ಬೀಳಲಿಲ್ಲ.

ಆದರೆ ದೇಶದ ಇತರ ಭಾಗಗಳಲ್ಲಿ ಹಿಂದುಳಿದ ವರ್ಗಗಳ ಯುವಕರು ಹಿಂದುತ್ವದ ಮತ್ತೇರಿಸಿಕೊಂಡರು.ವರಿಂದ ಆರೆಸ್ಸೆಸ್ ರಾಜಕೀಯ ವೇದಿಕೆಯಾದ ಬಿಜೆಪಿಗೆ ಅನುಕೂಲವಾಯಿತು. ಇತರ ಪಕ್ಷಗಳ ಬೆಂಬಲದಿಂದ ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಸಾಧ್ಯವಾಯಿತು. ಆದರೆ ರಾಮಮಂದಿರ ದಂಥ ಭಾವನಾತ್ಮಕ ಪ್ರಶ್ನೆಗಳ ಮೇಲೆ ಹಿಂದುಳಿದವರನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಆ ವರ್ಗಗಳ ಕೆಲವರಿಗೆ ರಾಜಕೀಯ ಅಧಿಕಾರವನ್ನು ನೀಡಲಾಯಿತು. ಶಿವಮೊಗ್ಗದಲ್ಲಿ ಊದಿನಕಡ್ಡಿ ಮಾರಾಟಗಾರ ರಾಗಿದ್ದ ಈಶ್ವರಪ್ಪರಂಥವರು ನಾಯಕತ್ವಕ್ಕೆ ಬಂದರು.

ದಕ್ಷಿಣ ಕನ್ನಡದಲ್ಲಿ ಮೊಗವೀರ, ಬಿಲ್ಲವ ಮುಂತಾದ ಹಿಂದುಳಿದ ಸಮಾಜದ ತರುಣರು ಹಣೆಗೆ ಕುಂಕುಮ ಬಳಿದು ಕೊಂಡು ಕೇಸು ಹಾಕಿಸಿಕೊಳ್ಳಲು, ಜೈಲು ಸೇರಲು, ಕೋರ್ಟಿಗೆ ಎಡತಾಕಲು ತಯಾರಾದರು.ದರೆ ಶ್ರೇಣಿಕೃತ ಸಮಾಜದಲ್ಲಿ ಶೋಷಣೆಗೊಳಗಾದ ಹಿಂದುಳಿದ ವರ್ಗಗಳಿಗೆ ಇದರಿಂದ ಸಾಮಾಜಿಕ ನ್ಯಾಯ ದೊರೆತಂತಾ ಗಲಿಲ್ಲ. ಈಶ್ವರಪ್ಪರಂಥವರು ಪಡೆದ ಅಧಿಕಾರ ಹಕ್ಕಿನಿಂದ ಬಂದುದಲ್ಲ. ರಾಜಕೀಯ ತಂತ್ರದ ಭಾಗವಾಗಿ ಭಿಕ್ಷೆಯಾಗಿ ಬಂದುದು. ಹಿಂದುತ್ವದ ಜಾತಿ ವ್ಯವಸ್ಥೆಯ ಚೌಕಟ್ಟಿನ ಒಳಗೆಯೇ ಹಿಂದುಳಿದ ವರ್ಗಗಳ ಕೃಪಾಶ್ರಿತರಾಗಿರಬೇಕೆಂಬ ಹುನ್ನಾರ ಇದರಲ್ಲಿದೆ.

ಅಂತಲೇ ಮೀಸಲಾತಿ ಹಾಗೂ ಜನಗಣಿತಿ ಯಂಥ ಪ್ರಶ್ನೆಯಲ್ಲಿ ರಾಜಕೀಯ ಪಕ್ಷವಾಗಿ ಬಿಜೆಪಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡಿದರೆ ಆರೆಸ್ಸೆಸ್ ನೇರವಾಗಿ ವಿರೋಧಿಸುತ್ತದೆ. ಈಶ್ವರಪ್ಪ ‘‘ರಂಗನಾಥ ಮಿಶ್ರಾ ಆಯೋಗದ ಬಗ್ಗೆ ನಿಮ್ಮ ನಿಲುವೇನು?’’ ಎಂದು ಪ್ರತಿಪಕ್ಷ ನಾಯಕರಿಗೆ ಸವಾಲು ಹಾಕುತ್ತಾರೆ. ಆದರೆ ಜಾತಿ ಜನಗಣತಿ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಅವರು ಬಹಿರಂಗಪಡಿಸಬೇಕಾಗಿದೆ. ಇಲ್ಲದಿದ್ದರೆ ಅವರು ‘ಹಿಂದುಳಿದವ’ ಎಂದು ಹೇಳಿಕೊಳ್ಳುತ್ತಿರು ವುದು ಬರೀ ಬೂಟಾಟಿಕೆ ಎನ್ನಬೇಕಾಗುತ್ತದೆ.

ಬಿಜೆಪಿ ತಾನು ಸ್ವತಂತ್ರ ರಾಜಕೀಯ ಪಕ್ಷ. ಯಾರ ನಿಯಂತ್ರಣವೂ ತನ್ನ ಮೇಲಿಲ್ಲ ಎಂದು ಹೇಳುತ್ತಿದೆ. ಆದರೆ ಈ ಪಕ್ಷದ ನೀತಿ ಧೋರಣೆಗಳು ಹಾಗೂ ಸಂಘಟನಾ ವ್ಯವಸ್ಥೆಯ ಮೇಲೆ ಆರೆಸ್ಸೆಸ್ ಬಿಗಿಯಾದ ಹಿಡಿತ ಹೊಂದಿರುವುದು ಗುಟ್ಟಿನ ಸಂಗತಿಯಲ್ಲ. ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ಗಡ್ಕರಿಯನ್ನು ನೇಮಕ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಗಡ್ಕರಿಗೆ ಉಭಯ ಸಂಕಟ ಆರಂಭವಾಗಿದೆ.

ಕಾಂಗ್ರೆಸ್ ಹಾಗೂ ಇತರ ಜಾತ್ಯತೀತ ಪಕ್ಷಗಳಂತೆ ಜಾತಿ ಜನಗಣತಿಯನ್ನು ಬೆಂಬಲಿಸದಿದ್ದರೆ ಬಿಜೆಪಿಯಲ್ಲಿನ ಹಿಂದುಳಿದ ಜನವರ್ಗಗಳ ನಾಯಕರು ಬಂಡೇಳುತ್ತಾರೆ. ಬೆಂಬಲಿಸಿದರೆ ಆರೆಸ್ಸೆಸ್ ಗುರುಗಳು ಕಣ್ಣು ಕೆಂಪಗೆ ಮಾಡುತ್ತಾರೆ. ಹಿಂದುಳಿದ ಸಮುದಾಯದ ನಾಯಕರು ತಿರುಗಿ ಬಿದ್ದರೆ ಹಿಂದುತ್ವದ ಹೆಸರಿನಲ್ಲಿ ಕಟ್ಟಿಕೊಂಡಿರುವ ಓಟ್ ಬ್ಯಾಂಕ್ ನಾಶವಾಗುತ್ತದೆ. ಆಗ ಪಕ್ಷದ ರಾಜಕೀಯ ಅಡಿಪಾಯವೇ ಕುಸಿದು ಬೀಳುತ್ತದೆ. ಹೀಗಾಗಿ ಅವರು ದಿಕ್ಕುಗಾಣ ದಂತಾಗಿದ್ದಾರೆ.

ಜಾತಿ ಜನಗಣತಿಯಿಂದ ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಆರೆಸ್ಸೆಸ್ ವಾದವಾಗಿದೆ. ಅದರ ದೃಷ್ಟಿಯಲ್ಲಿ ಹಿಂದುಗಳು ಮಾತ್ರ ಈ ದೇಶದ ಸಮಾಜ. ಮುಸ್ಲಿಂ, ಕ್ರೈಸ್ತ ಸಮುದಾಯದವರೂ ಕೂಡ ಈ ದೇಶದ ಪ್ರಜೆಗಳೆಂಬುದನ್ನು ಅವರು ಒಪ್ಪುವುದಿಲ್ಲ. ಜಾತಿ ಸೌಹಾರ್ದದ ಹೆಸರಿನಲ್ಲಿ ಪುರೋಹಿತಶಾಹಿಯ ಜನಿವಾರಕ್ಕೆ ಹಿಂದುಳಿದ ವರನ್ನು ಕಟ್ಟಿ ಹಾಕಿ ಅಲ್ಪಸಂಖ್ಯಾತರ ಮೇಲೆ ಹಿಂಸೆಗೆ ಪ್ರಚೋದಿಸುವುದೇ ಸಂಘಪರಿವಾರದ ಹಿಡನ್ ಅಜೆಂಡಾವಾಗಿದೆ.

ಜಾತಿ ಜನಗಣತಿಯಿಂದ ಈ ಹಿಂದೆ ಪರಿಶಿಷ್ಟ ವರ್ಗಗಳ ನಿರ್ದಿಷ್ಟ ಸಂಖ್ಯೆ ದಾಖಲಾಗಿ ಅವರು ಎಚ್ಚೆತ್ತು ಮೀಸಲಾತಿ ಯಂಥ ಸೌಕರ್ಯ ಪಡೆದಂತೆ ಹಿಂದುಳಿದ ಜಾತಿಗಳ ಸಂಖ್ಯಾ ಪ್ರಮಾಣ ದಾಖಲಾಗಿ ಅವರು ಸಾಮಾಜಿಕ ನ್ಯಾಯಕ್ಕಾಗಿ ಗುಡುಗಿದರೆ ಮನುವಾದಿಗಳ ಚಡ್ಡಿ ಕಳಚಿ ಬೀಳುತ್ತದೆ. ಆಗ ಈಶ್ವರಪ್ಪನಂಥವರು ಮುಂಚಿನಂತೆ ಊದಿನ ಕಡ್ಡಿ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ರಾಮಾಜೋಯಿಸರು ಗಾಯತ್ರಿ ಮಂತ್ರ ಪಠಿಸುತ್ತ ಪರಲೋಕ ಚಿಂತನೆಯಲ್ಲಿ ಕಾಲ ಕಳೆಯಬೇಕಾಗುತ್ತದೆ.

ಅಂತಲೇ ಈ ಜನಗಣತಿ ಇವರಿಗೆ ಬೇಡವಾಗಿದೆ. ಂದೂ’ ಎಂಬುದು ಸಂಘ ಪರಿವಾರದ ಭ್ರಾಮಕ ಸೃಷ್ಟಿಯಾಗಿದೆ. ಡಾ. ಅಂಬೇಡ್ಕರ್ ಹೇಳಿದಂತೆ ‘‘ಪ್ರತಿಯೊಬ್ಬ ಹಿಂದುವು ಒಂದು ಜಾತಿಯಲ್ಲಿ ಹುಟ್ಟಿದ್ದಾನೆ ಮತ್ತು ಆ ಜಾತಿಯ ಅವನ ಧಾರ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಜೀವನವನ್ನು ತೊಟ್ಟಿಲಿನಿಂದ ಶ್ಮಶಾನದ ಗುಂಡಿಯವರೆಗೆ ನಿರ್ಧರಿಸುತ್ತದೆ’ ಆದ್ದರಿಂದಲೇ ಜಾತಿ ಎಂಬ ವಾಸ್ತವವನ್ನು ತಳ್ಳಿ ಹಾಕಲು ಸಾಧ್ಯವೇ ಇಲ್ಲ.

ಇದನ್ನು ಕಮ್ಯುನಿಸ್ಟ್ ಪಕ್ಷಗಳು ಈಗ ಒಪ್ಪಿಕೊಂಡಿವೆ.ಬಿಕ್ಕಟ್ಟಿನಿಂದ ಸಂಘಪರಿವಾರ ಪಾರಾಗಬೇಕಾದರೆ ತೊಂಬತ್ತರ ದಶಕದ ಮಂದಿರ ನಿರ್ಮಾಣದಂಥ ವಿವಾದ ಕೆರಳಿಸಿ ದೇಶದಲ್ಲಿ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಬೇಕು. ಹಿಂದುಗಳನ್ನು ಕೇಸರಿ ಬಾವುಟದಡಿ ತರಬೇಕು ಎಂಬುದು ಆರೆಸ್ಸೆಸ್ ಷಡ್ಯಂತ್ರವಾಗಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ. ಅಂಥ ದುಸ್ಸಾಹಸಕ್ಕೆ ಕೈ ಹಾಕಿದರೆ ರಾಜಕೀಯವಾಗಿ ಬಿಜೆಪಿ ಹರಾಕಿರಿ ಮಾಡಿ ಕೊಂಡಂತಾಗುತ್ತದೆ. *


No comments:

Post a Comment